<p><strong>ಕಡೂರು:</strong> ‘ಕೃಷಿಯೆಂಬುದು ತಪಸ್ಸಿದ್ದಂತೆ. ಮನವಿಟ್ಟು ದುಡಿದರೆ ಬದುಕೇ ಹಸನಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ನಿಡಘಟ್ಟದ ಕೃಷಿಕ ಕಿರಣ್.</p>.<p>ಅವರ ಮಾತಿಗೆ ಅನ್ವರ್ಥಕವಾಗಿ ಅವರ ಕೃಷಿ ಚಟುವಟಿಕೆಗಳಿವೆ. ನಿಡಘಟ್ಟದಲ್ಲಿನ 12 ಎಕರೆ ಜಮೀನಿನಲ್ಲಿ ನಾಲ್ಕು ಕೊಳವೆಬಾವಿ ಬಳಸಿಕೊಂಡು ಕೃಷಿ ಸಾಧನೆ ಮಾಡಿದ್ದಾರೆ.</p>.<p>5 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಎರಡು ಎಕರೆ ಅಡಿಕೆ, ಮೂರು ಎಕರೆ ತೆಂಗು, ಎರಡು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ನಡುನಡುವೆಯೇ ಕಾಲಮಾನಕ್ಕನುಗುಣವಾಗಿ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.</p>.<p>ಹತ್ತು ಗುಂಟೆ ವಿಸ್ತೀರ್ಣದಲ್ಲಿ ಪಾಲಿಹೌಸ್ ಮಾಡಿ ಅದರಲ್ಲಿ ಗಿಡಗಳ ನರ್ಸರಿ ಮಾಡಿದ್ದು, ಹಾಸನ, ಹೊಸದುರ್ಗ ಮುಂತಾದ ಕಡೆಗಳ ರೈತರಿಗೆ ಟೊಮೆಟೊ ಸಸಿಗಳನ್ನು ನೀಡುತ್ತಾರೆ.</p>.<p>ಅಡಿಕೆಯಲ್ಲಿ ಎಕರೆಗೆ 75 ಕ್ವಿಂಟಲ್ ಹಸಿ ಅಡಿಕೆ ಇಳುವರಿ ಪಡೆದಿದ್ದಾರೆ. ಕಳೆದ ವರ್ಷ 20 ಟನ್ ದಾಳಿಂಬೆ ಇಳುವರಿ ಬಂದಿದೆ.ಪ್ರತಿಯೊಂದು ಬೆಳೆಗೂ ಹನಿನೀರಾವರಿ ಕಲ್ಪಿಸಿರುವುದು ಕಿರಣ್ ವಿಶೇಷ.</p>.<p>‘ದಾಳಿಂಬೆ ಹಣ್ಣಿಗೆ ಮಾರುಕಟ್ಟೆಯ ತೊಂದರೆಯಿಲ್ಲ. ಸ್ಥಳಕ್ಕೇ ಬಂದು ಖರೀದಿಸುವವರಿದ್ದಾರೆ. ಟೊಮೆಟೊ ಬೆಳೆ ಉತ್ಕೃಷ್ಟವಾಗಿ ಬಂದಿದ್ದರೂ , ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತಾದರೂ ದೊಡ್ಡ ನಷ್ಟವಾಗಲಿಲ್ಲ’ ಎನ್ನುತ್ತಾರೆ ಕಿರಣ್.</p>.<p>‘ಕೃಷಿ ಸುಲಭ ಕಾಯಕವಲ್ಲ. ಆದರೆ ಬಹುಕಷ್ಟದ ಬದುಕೂ ಅಲ್ಲ. ಅತೀವ ಶ್ರದ್ಧೆ ಮತ್ತು ಮನಃಪೂರ್ವಕವಾಗಿ ಕಾಯಕ ಮಾಡಿದರೆ ಅದಕ್ಕೆ ಫಲ ಸಿಗುತ್ತದೆ. ನೆಮ್ಮದಿಯ, ಸ್ವಾವಲಂಬನೆಯ ಬದುಕು ನಮ್ಮದಾಗುತ್ತದೆ. ಉಡಾಫೆ ಮಾಡಿ ಕೃಷಿಗೆ ಕೈ ಹಾಕದಿರುವುದೇ ಲೇಸು’ ಎನ್ನುತ್ತಾರೆ ಎನ್ನುವ ಕಿರಣ್.</p>.<p>ಅವರಿಗೆ ತಂದೆ ಭೈರಶೆಟ್ಟಿ ತಾಯಿ ಸಾವಿತ್ರಮ್ಮ ಮತ್ತು ಸಹೋದರ ಸುರೇಶ್ ಅವರ ನಿರಂತರ ಸಹಕಾರವಿದೆ. ಹೆಚ್ಚಿನ ಮಾಹಿತಿಗೆ (ಮೊ. 9880442288) ಕಿರಣ್ ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ‘ಕೃಷಿಯೆಂಬುದು ತಪಸ್ಸಿದ್ದಂತೆ. ಮನವಿಟ್ಟು ದುಡಿದರೆ ಬದುಕೇ ಹಸನಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ನಿಡಘಟ್ಟದ ಕೃಷಿಕ ಕಿರಣ್.</p>.<p>ಅವರ ಮಾತಿಗೆ ಅನ್ವರ್ಥಕವಾಗಿ ಅವರ ಕೃಷಿ ಚಟುವಟಿಕೆಗಳಿವೆ. ನಿಡಘಟ್ಟದಲ್ಲಿನ 12 ಎಕರೆ ಜಮೀನಿನಲ್ಲಿ ನಾಲ್ಕು ಕೊಳವೆಬಾವಿ ಬಳಸಿಕೊಂಡು ಕೃಷಿ ಸಾಧನೆ ಮಾಡಿದ್ದಾರೆ.</p>.<p>5 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಎರಡು ಎಕರೆ ಅಡಿಕೆ, ಮೂರು ಎಕರೆ ತೆಂಗು, ಎರಡು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ನಡುನಡುವೆಯೇ ಕಾಲಮಾನಕ್ಕನುಗುಣವಾಗಿ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.</p>.<p>ಹತ್ತು ಗುಂಟೆ ವಿಸ್ತೀರ್ಣದಲ್ಲಿ ಪಾಲಿಹೌಸ್ ಮಾಡಿ ಅದರಲ್ಲಿ ಗಿಡಗಳ ನರ್ಸರಿ ಮಾಡಿದ್ದು, ಹಾಸನ, ಹೊಸದುರ್ಗ ಮುಂತಾದ ಕಡೆಗಳ ರೈತರಿಗೆ ಟೊಮೆಟೊ ಸಸಿಗಳನ್ನು ನೀಡುತ್ತಾರೆ.</p>.<p>ಅಡಿಕೆಯಲ್ಲಿ ಎಕರೆಗೆ 75 ಕ್ವಿಂಟಲ್ ಹಸಿ ಅಡಿಕೆ ಇಳುವರಿ ಪಡೆದಿದ್ದಾರೆ. ಕಳೆದ ವರ್ಷ 20 ಟನ್ ದಾಳಿಂಬೆ ಇಳುವರಿ ಬಂದಿದೆ.ಪ್ರತಿಯೊಂದು ಬೆಳೆಗೂ ಹನಿನೀರಾವರಿ ಕಲ್ಪಿಸಿರುವುದು ಕಿರಣ್ ವಿಶೇಷ.</p>.<p>‘ದಾಳಿಂಬೆ ಹಣ್ಣಿಗೆ ಮಾರುಕಟ್ಟೆಯ ತೊಂದರೆಯಿಲ್ಲ. ಸ್ಥಳಕ್ಕೇ ಬಂದು ಖರೀದಿಸುವವರಿದ್ದಾರೆ. ಟೊಮೆಟೊ ಬೆಳೆ ಉತ್ಕೃಷ್ಟವಾಗಿ ಬಂದಿದ್ದರೂ , ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತಾದರೂ ದೊಡ್ಡ ನಷ್ಟವಾಗಲಿಲ್ಲ’ ಎನ್ನುತ್ತಾರೆ ಕಿರಣ್.</p>.<p>‘ಕೃಷಿ ಸುಲಭ ಕಾಯಕವಲ್ಲ. ಆದರೆ ಬಹುಕಷ್ಟದ ಬದುಕೂ ಅಲ್ಲ. ಅತೀವ ಶ್ರದ್ಧೆ ಮತ್ತು ಮನಃಪೂರ್ವಕವಾಗಿ ಕಾಯಕ ಮಾಡಿದರೆ ಅದಕ್ಕೆ ಫಲ ಸಿಗುತ್ತದೆ. ನೆಮ್ಮದಿಯ, ಸ್ವಾವಲಂಬನೆಯ ಬದುಕು ನಮ್ಮದಾಗುತ್ತದೆ. ಉಡಾಫೆ ಮಾಡಿ ಕೃಷಿಗೆ ಕೈ ಹಾಕದಿರುವುದೇ ಲೇಸು’ ಎನ್ನುತ್ತಾರೆ ಎನ್ನುವ ಕಿರಣ್.</p>.<p>ಅವರಿಗೆ ತಂದೆ ಭೈರಶೆಟ್ಟಿ ತಾಯಿ ಸಾವಿತ್ರಮ್ಮ ಮತ್ತು ಸಹೋದರ ಸುರೇಶ್ ಅವರ ನಿರಂತರ ಸಹಕಾರವಿದೆ. ಹೆಚ್ಚಿನ ಮಾಹಿತಿಗೆ (ಮೊ. 9880442288) ಕಿರಣ್ ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>