ಚಿಕ್ಕಮಗಳೂರು: ‘ವ್ಯಾಟ್ಸ್ ಆ್ಯಪ್’ನಲ್ಲಿ ಪರಿಚಯವಾದ ವ್ಯಕ್ತಿ ಕಳಿಸಿದ ಸಂದೇಶ, ವಿವರ ನಂಬಿ ತರೀಕೆರೆಯ ಶಿಕ್ಷಕಿಯೊಬ್ಬರು ಆನ್ಲೈನ್ ಮೂಲಕ ಹೂಡಿಕೆ ಮಾಡಿ ಎಂಟು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಶಿಕ್ಷಕಿಯ ಪತಿ ಟಿ.ಸಿ. ಕುಮಾರಸ್ವಾಮಿ ನಗರದ ಸಿಇಎನ್ (ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತು) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.