<p><strong>ತರೀಕೆರೆ:</strong> ದೋರನಾಳು ಗ್ರಾಮದಲ್ಲಿ 1976ರಲ್ಲಿ ಆರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1,390 ಷೇರುದಾರರಿದ್ದು, 2024-25ನೇ ಸಾಲಿನಲ್ಲಿ ಸಂಘವು ₹10.05 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.</p><p>ತಾಲ್ಲೂಕಿನ ದೋರನಾಳು ಗ್ರಾಮದ ಸಂಘದ ಆವರಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಷೇರು ಮೊತ್ತ ₹1.01 ಕೋಟಿ ಇದ್ದು, ಸಂಘದ ಸದಸ್ಯರಿಗೆ ₹9.07 ಕೋಟಿ ಸಾಲ ನೀಡಲಾಗಿದೆ. ಸಿಡಿಸಿಸಿ ಬ್ಯಾಂಕ್ನಲ್ಲಿ ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದೋರನಾಳು ಸಂಘಕ್ಕೆ ₹5 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಸರ್ಕಾರ ಸಿಡಿಸಿಸಿ ಬ್ಯಾಂಕ್ಗೆ ನೀಡಬೇಕಾದ ₹90 ಕೋಟಿ ಸಹಾಯಧನ ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ 2 ವರ್ಷಗಳಿಂದ ರೈತರಿಗೆ ಕೆಸಿಸಿ ಸಾಲ ನೀಡಲು ಸಾಧ್ಯವಾಗಿಲ್ಲ ಎಂದರು.</p>.<p>ಉಪಾಧ್ಯಕ್ಷೆ ಡಿ.ಎಸ್.ಪ್ರೇಮಾ, ನಿರ್ದೇಶಕರಾದ ಜಿ.ಎಸ್.ವಸಂತಕುಮಾರ್, ಡಿ.ಎಸ್.ಬಸವರಾಜು, ಡಿ.ಎನ್.ಶಿವರಾಜ್ ಕುಮಾರ್, ಎಸ್.ಸಿ.ಮಲ್ಲಿಕಾರ್ಜುನಪ್ಪ, ಡಿ.ಜಿ.ಸಂಕೇತ್, ರಾಜೇಶ್ವರಿ, ಡಿ.ಎಸ್.ವೆಂಕಟೇಶ್, ರಾಜಶೇಖರ್, ಡಿ.ಸೋಮಶೇಖರ್, ಜಿ.ಆರ್.ಈಶ್ವರಪ್ಪ, ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್. ವೆಂಕಟೇಶ್, ಸಿಇಒ ವೈ.ಕೆ.ಸಂಜಯ್, ಡಿ.ಎಸ್.ಪ್ರೇಮ, ರಾಜೇಶ್ವರಿ ರಾಜಶೇಖರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ದೋರನಾಳು ಗ್ರಾಮದಲ್ಲಿ 1976ರಲ್ಲಿ ಆರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1,390 ಷೇರುದಾರರಿದ್ದು, 2024-25ನೇ ಸಾಲಿನಲ್ಲಿ ಸಂಘವು ₹10.05 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.</p><p>ತಾಲ್ಲೂಕಿನ ದೋರನಾಳು ಗ್ರಾಮದ ಸಂಘದ ಆವರಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಷೇರು ಮೊತ್ತ ₹1.01 ಕೋಟಿ ಇದ್ದು, ಸಂಘದ ಸದಸ್ಯರಿಗೆ ₹9.07 ಕೋಟಿ ಸಾಲ ನೀಡಲಾಗಿದೆ. ಸಿಡಿಸಿಸಿ ಬ್ಯಾಂಕ್ನಲ್ಲಿ ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದೋರನಾಳು ಸಂಘಕ್ಕೆ ₹5 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಸರ್ಕಾರ ಸಿಡಿಸಿಸಿ ಬ್ಯಾಂಕ್ಗೆ ನೀಡಬೇಕಾದ ₹90 ಕೋಟಿ ಸಹಾಯಧನ ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ 2 ವರ್ಷಗಳಿಂದ ರೈತರಿಗೆ ಕೆಸಿಸಿ ಸಾಲ ನೀಡಲು ಸಾಧ್ಯವಾಗಿಲ್ಲ ಎಂದರು.</p>.<p>ಉಪಾಧ್ಯಕ್ಷೆ ಡಿ.ಎಸ್.ಪ್ರೇಮಾ, ನಿರ್ದೇಶಕರಾದ ಜಿ.ಎಸ್.ವಸಂತಕುಮಾರ್, ಡಿ.ಎಸ್.ಬಸವರಾಜು, ಡಿ.ಎನ್.ಶಿವರಾಜ್ ಕುಮಾರ್, ಎಸ್.ಸಿ.ಮಲ್ಲಿಕಾರ್ಜುನಪ್ಪ, ಡಿ.ಜಿ.ಸಂಕೇತ್, ರಾಜೇಶ್ವರಿ, ಡಿ.ಎಸ್.ವೆಂಕಟೇಶ್, ರಾಜಶೇಖರ್, ಡಿ.ಸೋಮಶೇಖರ್, ಜಿ.ಆರ್.ಈಶ್ವರಪ್ಪ, ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್. ವೆಂಕಟೇಶ್, ಸಿಇಒ ವೈ.ಕೆ.ಸಂಜಯ್, ಡಿ.ಎಸ್.ಪ್ರೇಮ, ರಾಜೇಶ್ವರಿ ರಾಜಶೇಖರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>