‘ಪ್ರತಿ ಗಿಡದಲ್ಲಿ 4 ರಿಂದ 5 ಕೆ.ಜಿ. ಹಣ್ಣು ಸಿಗುತ್ತದೆ. ಪ್ರತಿ ಹಣ್ಣು 250 ಗ್ರಾಂನಿಂದ 400 ಗ್ರಾಂ ಇರುತ್ತದೆ. ಈ ಹಣ್ಣಿನಿಂದ ಉತ್ತಮ ಆರೋಗ್ಯ ಪಡೆಯಬಹುದು. ರಕ್ತದೊತ್ತಡ, ಮಧುಮೇಹದಿಂದ ಗುಣವಾಗಲು, ರಕ್ತಕಣಗಳ ಉತ್ಪತ್ತಿಗೂ ಈ ಹಣ್ಣು ಸಹಕಾರಿ. ಕೆಲವೊಮ್ಮೆ ಕೆ.ಜಿ.ಗೆ ₹ 200 ಇದ್ದ ಬೆಲೆ ₹ 100,₹ 80ಕ್ಕೆ ಇಳಿಯುತ್ತದೆ. ಗ್ರಾಮೀಣ ಭಾಗದ ಜನರಿಗೆ ಈ ಹಣ್ಣಿನ ಬಗ್ಗೆ ಹೆಚ್ಚು ತಿಳಿದಿಲ್ಲ. ಅರಿವು ಮೂಡಿಸುವ ಮೂಲಕ ಸೇವನೆಗೆ ಪ್ರೇರೇಪಿಸಬೇಕಿದೆ. ಬೆಳೆಯುವುದಕ್ಕೂ ಪ್ರೋತ್ಸಾಹ ನೀಡಬೇಕಿದೆ’ ಎಂದು ಜನಾರ್ದನ್ ಅವರ ಪುತ್ರ ಮುರಳೀಧರ್ ಹೇಳುತ್ತಾರೆ.