ಗಂಗಾವತಿಯ 50 ಪ್ರವಾಸಿಗರ ತಂಡ ಕೋಟೆ ವೀಕ್ಷಣೆ ಮಾಡಿ ವಾಪಸ್ ಇಳಿಯುವಾಗ ಸಂಜೆ 5.50ರಲ್ಲಿ ಚಿರತೆ ಕಾಣಿಸಿಕೊಂಡಿತು. 6ನೇ ಸುತ್ತಿನ ಕೋಟೆ ಬಾಗಿಲಿನ ಹೆಬ್ಬಂಡೆಯ ಮೇಲೆ ಚಿರತೆ ಕುಳಿತಿತ್ತು. ಸುಮಾರು ಅರ್ಧಗಂಟೆ ಕಾಲ ಚಿರತೆ ಅಲ್ಲಿಯೇ ಕುಳಿತಿತ್ತು. ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಛಾಯಾಚಿತ್ರ ಕ್ಲಿಕ್ಕಿಸಿಕೊಂಡರು.