‘ನಾವೇ ಶ್ರೇಷ್ಠರು ಎಂದು ಬಿಂಬಿಸಿಕೊಂಡ ಮನುವಾದಿಗಳು ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿಯಂತಹ ದೇವರುಗಳನ್ನು ತಾವು ಇಟ್ಟುಕೊಂಡರು. ದಲಿತರಿಗೆ, ಹಿಂದುಳಿದವರಿಗೆ ಕೋಳಿ, ಕುರಿ, ಕೋಣ ಬಲಿಕೊಡುವ ಗುಳ್ಳಮ್ಮ, ಮಾರಮ್ಮ, ದುರಗಮ್ಮರಂತಹ ದೇವಿಯರನ್ನು ನೀಡಿದರು. ಮತದಾನದಿಂದ ದೇಶ ಬದಲಾಗುತ್ತದೆಯೇ ಹೊರತು, ಮಂತ್ರ, ಗುಡಿ, ಗೋಪುರಗಳಿಂದ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಪೆನ್ನಿನ ಮೂಲಕ ದೇಶವನ್ನು ಬದಲಿಸಿದರು. ಆದರೆ, ಈಗ ಪೆನ್ನಿನ ಬದಲಿಗೆ ಗನ್ನುಗಳು ಮಾತನಾಡುತ್ತಿವೆ’ ಎಂದು ಅಸಹನೆ ವ್ಯಕ್ತಪಡಿಸಿದರು.