<p><strong>ಹಿರಿಯೂರು:</strong> ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ದೊರೆಯದ ಕಾರಣ ಹತಾಶಗೊಂಡ ರೈತರೊಬ್ಬರು ಈರುಳ್ಳಿಯನ್ನು ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದಾರೆ.</p>.<p>ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ರಾಮಪ್ಪ ಮೆಣಸಿನಕಾಯಿ, ಹತ್ತಿಯ ಜೊತೆಗೆ ಒಂದೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇದಕ್ಕೆ ₹ 55 ಸಾವಿರದಿಂದ ₹ 60 ಸಾವಿರದಷ್ಟು ಖರ್ಚು ಮಾಡಿದ್ದರು.</p>.<p>‘ಕುರಿ ಮೇಯಿಸಲು ವಲಸೆ ಹೋಗಿದ್ದ ನಾನು ಯುಗಾದಿ ಹಬ್ಬದ ಸಮಯಕ್ಕೆ ಈರುಳ್ಳಿ ಕಟಾವಿಗೆ ಬಂದಿದ್ದರಿಂದ ಊರಿಗೆ ಮರಳಿದ್ದೆ. ಅದೇ ವೇಳೆಗೆ ಲಾಕ್ಡೌನ್ ಘೋಷಣೆ ಆಯಿತು. ಈರುಳ್ಳಿ ತುಂಬಲು ಖಾಲಿ ಚೀಲ ಸಿಗುವುದೂ ಕಷ್ಟವಾಗಿತ್ತು. ₹ 30–₹ 35 ಬೆಲೆಯ ಚೀಲಗಳನ್ನು ₹ 48ಕ್ಕೆ ಖರೀದಿಸಿ ತಂದೆ. 70 ಕೆ.ಜಿ ತೂಕದ ಒಂದು ಚೀಲ ಈರುಳ್ಳಿ ಕೊಯ್ಯಲು ₹ 50 ಕೊಟ್ಟಿದ್ದೆ. ಲಾಕ್ಡೌನ್ ತೆರವಿನ ನಂತರ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಖರೀದಿದಾರರು ಚೀಲವೊಂದನ್ನು ₹150ರಿಂದ ₹ 200ಕ್ಕೆ ಕೇಳಿದರು. ಅಷ್ಟು ಕಡಿಮೆ ದರಕ್ಕೆ ಕೊಡಲು ಮನಸ್ಸು ಒಪ್ಪಲಿಲ್ಲ. ಈರುಳ್ಳಿ ಚೀಲದಲ್ಲಿಯೇ ಕೊಳೆಯಲಾರಂಭಿಸಿತು. ಹೀಗಾಗಿ ಬೇಸರದಿಂದ ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದು ಕೊಯ್ಲು ಮಾಡುವ ವೇಳೆಗೆ ₹ 30 ಸಾವಿರದಿಂದ ₹ 40 ಸಾವಿರ ಖರ್ಚು ಬರುತ್ತದೆ. ಒಂದೂವರೆ ಎಕರೆಯಲ್ಲಿ 75 ಪ್ಯಾಕೆಟ್ ಈರುಳ್ಳಿ ಬೆಳೆದಿದ್ದೆ. ₹650– ₹ 700 ದರ ಸಿಕ್ಕಿದ್ದರೆ ಹಾಕಿದ ಬಂಡವಾಳ ಬರುತ್ತಿತ್ತು. ₹150– ₹200 ಕ್ಕೆ ಮಾರಿದ್ದರೆ ಚೀಲ ಮತ್ತು ಕೂಲಿ, ಮಾರುಕಟ್ಟೆಗೆ ಸಾಗಿಸುವ ಖರ್ಚೂ ಬರುತ್ತಿರಲಿಲ್ಲ. ಹೀಗಾಗಿ ಮಾರಾಟ ಮಾಡಿ ನಷ್ಟ ಅನುಭವಿಸುವುದು ಬೇಡ ಎಂದು ಇಂತಹ ತೀರ್ಮಾನ ಕೈಗೊಂಡೆ’ ಎಂದು ರಾಮಪ್ಪ ಹೇಳಿದರು.</p>.<p>‘ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು. ಈರುಳ್ಳಿ ಹೆಚ್ಚು ಬೆಳೆಯುವ ಕಡೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ದೊರೆಯದ ಕಾರಣ ಹತಾಶಗೊಂಡ ರೈತರೊಬ್ಬರು ಈರುಳ್ಳಿಯನ್ನು ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದಾರೆ.</p>.<p>ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ರಾಮಪ್ಪ ಮೆಣಸಿನಕಾಯಿ, ಹತ್ತಿಯ ಜೊತೆಗೆ ಒಂದೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇದಕ್ಕೆ ₹ 55 ಸಾವಿರದಿಂದ ₹ 60 ಸಾವಿರದಷ್ಟು ಖರ್ಚು ಮಾಡಿದ್ದರು.</p>.<p>‘ಕುರಿ ಮೇಯಿಸಲು ವಲಸೆ ಹೋಗಿದ್ದ ನಾನು ಯುಗಾದಿ ಹಬ್ಬದ ಸಮಯಕ್ಕೆ ಈರುಳ್ಳಿ ಕಟಾವಿಗೆ ಬಂದಿದ್ದರಿಂದ ಊರಿಗೆ ಮರಳಿದ್ದೆ. ಅದೇ ವೇಳೆಗೆ ಲಾಕ್ಡೌನ್ ಘೋಷಣೆ ಆಯಿತು. ಈರುಳ್ಳಿ ತುಂಬಲು ಖಾಲಿ ಚೀಲ ಸಿಗುವುದೂ ಕಷ್ಟವಾಗಿತ್ತು. ₹ 30–₹ 35 ಬೆಲೆಯ ಚೀಲಗಳನ್ನು ₹ 48ಕ್ಕೆ ಖರೀದಿಸಿ ತಂದೆ. 70 ಕೆ.ಜಿ ತೂಕದ ಒಂದು ಚೀಲ ಈರುಳ್ಳಿ ಕೊಯ್ಯಲು ₹ 50 ಕೊಟ್ಟಿದ್ದೆ. ಲಾಕ್ಡೌನ್ ತೆರವಿನ ನಂತರ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಖರೀದಿದಾರರು ಚೀಲವೊಂದನ್ನು ₹150ರಿಂದ ₹ 200ಕ್ಕೆ ಕೇಳಿದರು. ಅಷ್ಟು ಕಡಿಮೆ ದರಕ್ಕೆ ಕೊಡಲು ಮನಸ್ಸು ಒಪ್ಪಲಿಲ್ಲ. ಈರುಳ್ಳಿ ಚೀಲದಲ್ಲಿಯೇ ಕೊಳೆಯಲಾರಂಭಿಸಿತು. ಹೀಗಾಗಿ ಬೇಸರದಿಂದ ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದು ಕೊಯ್ಲು ಮಾಡುವ ವೇಳೆಗೆ ₹ 30 ಸಾವಿರದಿಂದ ₹ 40 ಸಾವಿರ ಖರ್ಚು ಬರುತ್ತದೆ. ಒಂದೂವರೆ ಎಕರೆಯಲ್ಲಿ 75 ಪ್ಯಾಕೆಟ್ ಈರುಳ್ಳಿ ಬೆಳೆದಿದ್ದೆ. ₹650– ₹ 700 ದರ ಸಿಕ್ಕಿದ್ದರೆ ಹಾಕಿದ ಬಂಡವಾಳ ಬರುತ್ತಿತ್ತು. ₹150– ₹200 ಕ್ಕೆ ಮಾರಿದ್ದರೆ ಚೀಲ ಮತ್ತು ಕೂಲಿ, ಮಾರುಕಟ್ಟೆಗೆ ಸಾಗಿಸುವ ಖರ್ಚೂ ಬರುತ್ತಿರಲಿಲ್ಲ. ಹೀಗಾಗಿ ಮಾರಾಟ ಮಾಡಿ ನಷ್ಟ ಅನುಭವಿಸುವುದು ಬೇಡ ಎಂದು ಇಂತಹ ತೀರ್ಮಾನ ಕೈಗೊಂಡೆ’ ಎಂದು ರಾಮಪ್ಪ ಹೇಳಿದರು.</p>.<p>‘ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು. ಈರುಳ್ಳಿ ಹೆಚ್ಚು ಬೆಳೆಯುವ ಕಡೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>