<p><strong>ಚಿತ್ರದುರ್ಗ:</strong> ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಬುಧವಾರ ಸ್ಪಷ್ಟನೆ ನೀಡಿದರು.</p><p>ರೇಣುಕಸ್ವಾಮಿ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಸಂಬಂಧ ಕುಟುಂಬ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.</p><p>2024, ಜೂನ್ 8ರಂದು ರೇಣುಕಸ್ವಾಮಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದರು. ನಟ ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ರೇಣುಕಸ್ವಾಮಿ ಮೃತದೇಹವನ್ನು ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿತ್ತು.</p><p>‘ರುದ್ರಭೂಮಿಯಲ್ಲಿ ಜಾಗದ ಕೊರತೆ ಇದ್ದ ಕಾರಣ ಸಮಾಜದವರು ಜಾಗವನ್ನು ಮಟ್ಟ ಮಾಡಿದ್ದಾರೆ. ಸಮಾಜದ ಮುಖಂಡರು ಕೈಗೊಂಡಿರುವ ಕ್ರಮದ ಬಗ್ಗೆ ನಮ್ಮ ತಕರಾರು ಇಲ್ಲ’ ಎಂದು ಕಾಶಿನಾಥಯ್ಯ ಶಿವನಗೌಡರ್ ತಿಳಿಸಿದರು.</p>.ಮಗನೇ ಹುಟ್ಟಿ ಬಂದ: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಕಣ್ಣೀರು.ರೇಣುಕಸ್ವಾಮಿ ಕೊಲೆಗೆ ಒಂದು ವರ್ಷ: ಸೊಸೆಗೆ ಸರ್ಕಾರಿ ನೌಕರಿ ಕೊಡಿ– ಕಾಶಿನಾಥಯ್ಯ.ರೇಣುಕಸ್ವಾಮಿ ಹತ್ಯೆ | ದರ್ಶನ್ ಭೇಟಿಯಾಗಿಲ್ಲ, ಹಣ ಕೊಟ್ಟಿಲ್ಲ: ಕಾಶಿನಾಥಯ್ಯ.ದರ್ಶನ್ಗೆ ಮಧ್ಯಂತರ ಜಾಮೀನು: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಬುಧವಾರ ಸ್ಪಷ್ಟನೆ ನೀಡಿದರು.</p><p>ರೇಣುಕಸ್ವಾಮಿ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಸಂಬಂಧ ಕುಟುಂಬ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.</p><p>2024, ಜೂನ್ 8ರಂದು ರೇಣುಕಸ್ವಾಮಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದರು. ನಟ ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ರೇಣುಕಸ್ವಾಮಿ ಮೃತದೇಹವನ್ನು ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿತ್ತು.</p><p>‘ರುದ್ರಭೂಮಿಯಲ್ಲಿ ಜಾಗದ ಕೊರತೆ ಇದ್ದ ಕಾರಣ ಸಮಾಜದವರು ಜಾಗವನ್ನು ಮಟ್ಟ ಮಾಡಿದ್ದಾರೆ. ಸಮಾಜದ ಮುಖಂಡರು ಕೈಗೊಂಡಿರುವ ಕ್ರಮದ ಬಗ್ಗೆ ನಮ್ಮ ತಕರಾರು ಇಲ್ಲ’ ಎಂದು ಕಾಶಿನಾಥಯ್ಯ ಶಿವನಗೌಡರ್ ತಿಳಿಸಿದರು.</p>.ಮಗನೇ ಹುಟ್ಟಿ ಬಂದ: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಕಣ್ಣೀರು.ರೇಣುಕಸ್ವಾಮಿ ಕೊಲೆಗೆ ಒಂದು ವರ್ಷ: ಸೊಸೆಗೆ ಸರ್ಕಾರಿ ನೌಕರಿ ಕೊಡಿ– ಕಾಶಿನಾಥಯ್ಯ.ರೇಣುಕಸ್ವಾಮಿ ಹತ್ಯೆ | ದರ್ಶನ್ ಭೇಟಿಯಾಗಿಲ್ಲ, ಹಣ ಕೊಟ್ಟಿಲ್ಲ: ಕಾಶಿನಾಥಯ್ಯ.ದರ್ಶನ್ಗೆ ಮಧ್ಯಂತರ ಜಾಮೀನು: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>