<p><strong>ಮಂಗಳೂರು:</strong> ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಹೊರವಲಯದ ಅಡ್ಯಾರ್ನ ವೃದ್ಧರೊಬ್ಬರನ್ನು ಜನವರಿ 30ರಂದು 108 ಆಂಬುಲೆನ್ಸ್ ಸಿಬ್ಬಂದಿ 1.5 ಕಿ.ಮೀ. ದೂರ ಸ್ಟ್ರೆಚರ್ ಮೇಲೆ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.</p>.<p>ಪಂಪ್ವೆಲ್ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಆಂಬುಲೆನ್ಸ್ನ ಚಾಲಕ ರಮೇಶ್ ಮತ್ತು ಶುಶ್ರೂಷಕ ರಾಜು ರೋಗಿಯನ್ನು ಹೊತ್ತು ಸಾಗಿಸಿದ ಸಿಬ್ಬಂದಿ. ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.</p>.<p>ಜ.30ರಂದು ಇಬ್ಬರೂ ಆಂಬುಲೆನ್ಸ್ನೊಂದಿಗೆ ಪಂಪ್ವೆಲ್ ವೃತ್ತದಲ್ಲಿದ್ದರು. ಅಡ್ಯಾರ್ ಗ್ರಾಮದ ವೃದ್ಧರೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಬೇಕೆಂಬ ಸೂಚನೆ ಅವರಿದ್ದ ಆಂಬುಲೆನ್ಸ್ಗೆ ಬಂತು. ಸ್ಥಳಕ್ಕೆ ತೆರಳಿದಾಗ ಆಂಬುಲೆನ್ಸ್ ರೋಗಿಯ ಮನೆಗೆ ತಲುಪಲು ದಾರಿ ಇರಲಿಲ್ಲ.</p>.<p>ರಸ್ತೆಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ ಸಿಬ್ಬಂದಿ ರೋಗಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ 1.5 ಕಿ.ಮೀ. ಹೊತ್ತು ತಂದಿದ್ದಾರೆ. ಬಳಿಕ ಆಂಬುಲೆನ್ಸ್ ನೆರವಿನಲ್ಲಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಹೊರವಲಯದ ಅಡ್ಯಾರ್ನ ವೃದ್ಧರೊಬ್ಬರನ್ನು ಜನವರಿ 30ರಂದು 108 ಆಂಬುಲೆನ್ಸ್ ಸಿಬ್ಬಂದಿ 1.5 ಕಿ.ಮೀ. ದೂರ ಸ್ಟ್ರೆಚರ್ ಮೇಲೆ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.</p>.<p>ಪಂಪ್ವೆಲ್ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಆಂಬುಲೆನ್ಸ್ನ ಚಾಲಕ ರಮೇಶ್ ಮತ್ತು ಶುಶ್ರೂಷಕ ರಾಜು ರೋಗಿಯನ್ನು ಹೊತ್ತು ಸಾಗಿಸಿದ ಸಿಬ್ಬಂದಿ. ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.</p>.<p>ಜ.30ರಂದು ಇಬ್ಬರೂ ಆಂಬುಲೆನ್ಸ್ನೊಂದಿಗೆ ಪಂಪ್ವೆಲ್ ವೃತ್ತದಲ್ಲಿದ್ದರು. ಅಡ್ಯಾರ್ ಗ್ರಾಮದ ವೃದ್ಧರೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಬೇಕೆಂಬ ಸೂಚನೆ ಅವರಿದ್ದ ಆಂಬುಲೆನ್ಸ್ಗೆ ಬಂತು. ಸ್ಥಳಕ್ಕೆ ತೆರಳಿದಾಗ ಆಂಬುಲೆನ್ಸ್ ರೋಗಿಯ ಮನೆಗೆ ತಲುಪಲು ದಾರಿ ಇರಲಿಲ್ಲ.</p>.<p>ರಸ್ತೆಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ ಸಿಬ್ಬಂದಿ ರೋಗಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ 1.5 ಕಿ.ಮೀ. ಹೊತ್ತು ತಂದಿದ್ದಾರೆ. ಬಳಿಕ ಆಂಬುಲೆನ್ಸ್ ನೆರವಿನಲ್ಲಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>