ಮಂಗಳೂರು: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಇಫ್ಕೊ ‘ಸಹಕಾರಿತಾ ಬಂಧು’ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಎಸ್.ಆರ್.ರಂಗಮೂರ್ತಿ ಅವರನ್ನು ಕ್ಯಾಂಪ್ಕೊ ಸದಸ್ಯರ ಮತ್ತು ಆಡಳಿತ ಮಂಡಳಿಯ ಪರವಾಗಿ ಕ್ಯಾಂಪ್ಕೊ ಅಧ್ಯಕ್ಷ ಅಮಾಸೆಬೈಲು ಕಿಶೋರ್ ಕುಮಾರ್ ಕೊಡ್ಗಿ ನಿವಾಸಕ್ಕೆ ತೆರಳಿ ಅಭಿನಂದಿಸಿದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್, ನಿರ್ದೇಶಕರಾದ ದಯಾನಂದ ಹೆಗ್ಡೆ ಮತ್ತು ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಸಹಕಾರಿ ರಂಗದ ಸಾಧನೆಗಾಗಿ ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಅವರಿಗೆ ಇಫ್ಕೊ ‘ಸಹಕಾರಿತಾ ಬಂಧು’ ಪ್ರಶಸ್ತಿಯನ್ನು ಮೇ 31ರಂದು ಪ್ರದಾನ ಮಾಡಲಾಗಿತ್ತು.