ಜ.17ರಂದು ಸಹಾಯಕ ಖಾಝಿಗಳಾದ ಅಸ್ಪಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಜಳ್ ಆಶೀರ್ವಚನ, ರಶೀದ್ ಸಆದಿ ಬೋಳಿಯಾರ್ ಮುಖ್ಯ ಭಾಷಣ ಮಾಡುವರು. ಜ.18ರಂದು ಅಸ್ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಜಳ್ ಮದನಿ ಆಶೀರ್ವಚನ, ಕೋಯ ಕಾಪ್ಪಾಡ್ ಮತ್ತು ಸಂಗಡಿಗರಿಂದ ಗ್ರ್ಯಾಂಡ್ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಜ.19ರಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಮಜಿಲಿಸ್ ನಡೆಯಲಿದೆ. ಜ.20ರಂದು ಉರುಸ್ ಸಮಾರೋಪವು ಅಸ್ಸಯ್ಯದ್ ಕೂರತ್ ತಂಜಳ್ ಅಧ್ಯಕ್ಷತೆಯಲ್ಲಿ ಸಂಜೆ ಮಗ್ರಿಬ್ ನಮಾಝಿನ ನಂತರ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಾಮೂಹಿಕ ಝಿಯಾರತ್ ನಡೆಯಲಿದೆ. ರಾತ್ರಿ 8ಕ್ಕೆ ನೂರುಸ್ಸಾದಾತ್ ಅಸ್ಸಯ್ಯದ್ ಅಬ್ದುರಹ್ಮಾನ್ ಕೋಯ ತಂಜಳ್ ಬಾಯಾರ್ ದುವಾ ನೆರವೇರಿಸುವರು. ಜಾರಿಗೆಬೈಲು ಮಸೀದಿಯ ಮುದರಿಸ್ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ ತಾಜುದ್ದೀನ್ ಸಖಾಫಿ ಮುಸ್ತಫಾ ಸಖಾಫಿ ತೆನ್ನಲ, ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಹಿದಾಯತ್ತುಲ್ಲ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭಾಗವಹಿಸಲಿದ್ದಾರೆ. ಹಸನಬ್ಬ ಚಾರ್ಮಾಡಿ, ಅಬ್ದುಲ್ಲ ಮಾದುಮೂಲೆ ಅವರನ್ನು ಸನ್ಮಾನಿಸಲಾಗುವುದು ಎಂದರು.