ಧ್ವನಿವರ್ಧಕವನ್ನು ಗಟ್ಟಿಯಾಗಿ ಹಾಕಿದರೂ ಗೃಹ ಇಲಾಖೆ ಕ್ರಮ ಕೈಗೊಳ್ಳುವುದಿಲ್ಲ. ಧಾರ್ಮಿಕ ಪ್ರವಚನವಿರಲಿ, ಭಜನೆ ಕಾರ್ಯಕ್ರಮವೇ ಇರಲಿ, ಸಮಾಜಕ್ಕೆ ತೊಂದರೆ ನೀಡದೇ ಬಾಳುವ ವ್ಯವಸ್ಥೆ ನಿರ್ಮಾಣ ಆಗಬೇಕು. ನಮ್ಮ ಪೂಜಾ ಪದ್ಧತಿ ಶ್ರೇಷ್ಠ, ಉಳಿದವರದು ಕನಿಷ್ಠ ಎಂಬ ಭಾವನೆ ಮೂಡಿಸಬಾರದುಎಂ.ಬಿ.ಪುರಾಣಿಕ್, ವಿಎಚ್ಪಿ ಮುಖಂಡ
ದೇವಸ್ಥಾನಗಳಲ್ಲಿ ಧರ್ಮದ ಹೆಸರಿನಲ್ಲಿ ಸಿದ್ಧಾಂತ ಪ್ರತಿಪಾದಿಸುವ ಬಗ್ಗೆ ಗಮನವಿಡಬೇಕು. ಕೋಳಿ ಅಂಕ, ಹೊಡೆದಾಟಗಳಲ್ಲಿ ಭಾಗಿಯಾದವರನ್ನು ಹಿಂದೂ ಹೋರಾಟಗಾರ ಎಂಬ ಬದಲು ಕ್ರಿಮಿನಲ್ ಎಂದೇ ಪರಿಗಣಿಸಬೇಕು. ಜನಾಂಗೀಯ ಶ್ರೇಷ್ಠತೆ ಹೆಸರಿನಲ್ಲಿ ಯಕ್ಷಗಾನಗಳಲ್ಲಿ ಬೇರೆ ಧರ್ಮಗಳ ಹೀಯಾಳಿಸದಂತೆ ಮೇಳಗಳ ಯಜಮಾನರಿಗೆ ಸೂಚನೆ ನೀಡಬೇಕು.ಲಕ್ಷ್ಮೀಶ ಗಬ್ಲಡ್ಕ, ಧಾರ್ಮಿಕ ಪರಿಷತ್ ಸದಸ್ಯ
ಮನಸ್ಸುಗಳು ಕದಡಿವೆ. ಸೌಹಾರ್ದ ಸಾರುವುದಕ್ಕೆ ಸ್ವಾಮೀಜಿ, ಕ್ರೈಸ್ತ ಧರ್ಮಗುರು, ಮುಸ್ಲಿಂ ಧರ್ಮಗುರುಗಳನ್ನೆ ಸೇರಿಸಿ ಸೌಹಾರ್ದ ರ್ಯಾಲಿ ನಡೆಸಿ ಸಂದೇಶ ನೀಡೋಣ.ಮಹಮ್ಮದ್ ಕುಂಞಿ, ಶಾಂತಿ ಪ್ರಕಾಶನ
ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡ, ವಶೀಲಿಗೆ ಒಳಗಾಗದೆ ಕೆಲಸ ಮಾಡಿದರೆ ಶಾಂತಿ ಸ್ಥಾಪನೆ ಆಗುತ್ತದೆ. ಈಗಿನ ಅಧಿಕಾರಿಗಳು ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ನೀಡಿ.ಫಾ.ಮ್ಯಾಕ್ಸಿಂ, ಕ್ರೈಸ್ತ ಧರ್ಮಗುರು
ಸೈಬರ್ ಸೆಂಟರ್ ಬಲಪಡಿಸಿ, ವಾಟ್ಸ್ ಆ್ಯಪ್ ಗ್ರೂಪ್ಗಳ ಮೇಲೆ ಕಣ್ಣಿಡಿ. ಅವುಗಳ ಮೂಲಕ ಸಣ್ಣ ಮಕ್ಕಳಲ್ಲೂ ಧಾರ್ಮಿಕ ದ್ವೇಷ ಮೂಡಿಸಲಾಗುತ್ತಿದೆ.ಸನ್ನಿ ಡಿಸೋಜ, ರಾಜ್ಯ ರೈತ ಸಂಘದ ನಾಯಕ
ಉದ್ರೇಕಕಾರಿ ಭಾಷಣ ಮಾಡಿ ಯುವಕರನ್ನು ಬಡಿದೆಬ್ಬಿಸುವುದು ಸುಲಭ. ಅದರ ಅನಾಹುತ ನಿಲ್ಲಿಸುವುದು ಕಷ್ಟ. ಈ ವಿಚಾರ ಗೊತ್ತಿದ್ದೂ ಕೆಲ ಸಂಘಟನೆ ಇಂತಹ ಕೃತ್ಯದಲ್ಲಿ ತೊಡಗುತ್ತವೆ. ಇದನ್ನು ತಡೆಯುವುದು ಆಯಾ ಪಕ್ಷದ ಹಾಗೂ ಸಂಘಟನೆಗಳ ಹೊಣೆಯಾಬೇಕುಇಬ್ರಾಹಿಂ ಕೋಡಿಜಾಲ್, ಮುಸ್ಲಿಂ ಸೆಂಟ್ರಲ್ ಕಮಿಟಿ
ಸೌಹಾರ್ದ ಮೂಡಿಸಲು ಗ್ರಾಮಗಳಲ್ಲಿ ಸೌಹಾರ್ದ ಸಮಿತಿ ರಚಿಸಿ. ಜಿಲ್ಲಾ ಮಟ್ಟದಲ್ಲಿ ಕಾಣಿಸುವ ಕೋಮುವಾದಿ ಚಟುವಟಿಕೆ ಹಳ್ಳಿಗಳಲ್ಲಿ ಇಲ್ಲಕಣಚೂರು ಮೋನು, ಉದ್ಯಮಿ
ಘಟನೆ ಆದಾಗಲೇ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಶಾಂತಿ ಸಭೆ ನಡೆಸಬೇಕಿತ್ತು. ಹಿಂದೆ ಇದ್ದ ಅಧಿಕಾರಿಗಳನ್ನು ಹಾಗೂ ಈಗಿನವರನ್ನು ಜಿಲ್ಲೆಗೆ ನೇಮಿಸಿದ್ದು ಇದೇ ಸರ್ಕಾರ. ಅವರು ಬರುತ್ತಾರೆ ಹೋಗುತ್ತಾರೆ. ಜಿಲ್ಲೆಯಲ್ಲಿ ಇರುವವರು ಇಲ್ಲಿನ ಜನಸತೀಶ ಕುಂಪಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಶಾಂತಿ ಕಾಪಡುವತ್ತ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಸಮಾಜ ಘಾತುಕ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಇನ್ನೂ ಮುಂದುವರಿಯಬೇಕುಹರೀಶ್ ಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಶಾಲೆ ಕಾಲೇಜುಗಳಲ್ಲಿ ಎಲ್ಲ ಧರ್ಮಗಳ ಆಚರಣೆ ಪರಂಪರೆಗಳಿಗೆ ವೇದಿಕೆ ಕಲ್ಪಿಸಬೇಕು. ವಿದ್ಯಾರ್ಥಿಗಳಲ್ಲೂ ವಿಶಾಲ ಭಾವ ಮೂಡಿಸಬೇಕುವಿವೇಕ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆ,
ಕೋಮುವಾದಕ್ಕೂ ಅಕ್ರಮ ದಂಧೆಗೂ ಸಂಬಂಧ ಇದೆ. ಜಿಲ್ಲೆಯಲ್ಲಿರುವ ಅಕಾಡೆಮಿಗಳನ್ನು ಬಳಸಿ ಧಾರ್ಮಿಕ ಅಪನಂಬಿಕೆ ದೂರಮಾಡುವ ಕಾರ್ಯಕ್ರಮ ನಡೆಸಬೇಕು. ದ್ವೇಷ ಭಾಷಣ ಮಾಡುವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕುಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ
ರೋಗಕ್ಕ ಮದ್ದು ಹುಡುಕುವುದಕ್ಕಿಂತ ರೋಗ ಬಾರದಂತೆ ತಡೆಯಬೇಕು. ಕೋಮು ಹಿಂಸಾಚಾರಗಳಲ್ಲಿ ಪಾತ್ರಧಾರಿಗಳ ಬದಲು ಸೂತ್ರಧಾರಿಗಳ ವಿರುದ್ಧ ಕ್ರಮ ಆಗಬೇಕು.ಅಬ್ದುಲ್ ಜಲೀಲ್ ಕೃಷ್ಣಾಪುರ, ಎಸ್ಡಿಪಿಐ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.