ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು
ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು
ಬೌನ್ಸರ್ಗಳ ನಿರ್ಬಂಧ
ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಇದ್ದರೂ ಮುಂಭಾಗದ ‘ಗೌಂಡ್ ಜೀರೊ’ ವಲಯದ ಹಿಂದಿನ ಒಂದಷ್ಟು ಭಾಗದ ನಿಯಂತ್ರಣವನ್ನು ಬೌನ್ಸರ್ಗಳ ಕೈಗೆ ವಹಿಸಲಾಗಿತ್ತು. ಮಂಗಳೂರಿನ ಏಜೆನ್ಸಿಯೊಂದರಿಂದ ಬಂದಿದ್ದ ಬೌನ್ಸರ್ಗಳು ತಮಗೆ ಮೀಸಲಿರಿಸಿದ್ದ ಜಾಗದ ಕಡೆಗೆ ಪ್ರಮುಖರು ಹೋಗುವಾಗ ಮನಬಂದಂತೆ ತಳ್ಳಿದರು. ಮಹಿಳೆಯರು ಸೇರಿದಂತೆ ಹಲವು ಪತ್ರಕರ್ತರನ್ನೂ ಅವರು ತಡೆದರು. ತಮಗೆ ಮೀಸಲಿರಿಸಿರುವ ಜಾಗಕ್ಕೆ ಹೋಗುವುದಾಗಿ ಹೇಳಿದರೂ ತಳ್ಳಿದರು. ನಂತರ ಸಂಘಟಕರು ಬಂದು ಕರೆದುಕೊಂಡು ಹೋದರು.