ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಮಂಗಳೂರಿಗೆ ಹೆಜ್ಜೆ ಇಡಲೂ ಬಿಡೆವು: ಆರ್‌. ಅಶೋಕ

Published : 14 ಜುಲೈ 2024, 5:39 IST
Last Updated : 14 ಜುಲೈ 2024, 5:39 IST
ಫಾಲೋ ಮಾಡಿ
Comments
‘ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಬಿಡುವುದಿಲ್ಲ’
‘ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುತ್ತೇನೆ. ಹಿಂದೂ ಧರ್ಮವನ್ನು ಬಿಟ್ಟು ನಿಮ್ಮ ರಾಜಕೀಯ ನೀವು ಮಾಡಿ. ಧರ್ಮ–ಗಿರ್ಮ ಅಧರ್ಮಿಗಳಗೆ ಆಗುವ ವಿಷಯ ಅಲ್ಲ.  ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಖಂಡಿತಾ  ಬಿಡುವ ಪ್ರಶ್ನೆಯೇ ಇಲ್ಲ. ಎಷ್ಟರ ಮಟ್ಟಿಗೆ ಹೋಗಬೇಕೋ ಆ ಎತ್ತರದವರೆಗೆ ಹೋಗಲು ಸಿದ್ಧ. ನೀವು ಭಯೋತ್ಪಾದಕರು ಎಂದು ಬೇಕಾದರೆ ನನ್ನ ಮೇಲೆ ಕೇಸ್‌ ಹಾಕಿ ಒಳಗೆ ಹಾಕಿ. ನಾನೊಬ್ಬ ಹೋದರೆ ಮತ್ತೆ ಎಷ್ಟೊ ಶಾಸಕರು ಅದೇ ಕೆಲಸ ಮಾಡುತ್ತಾರೆ. ನಾವಿಷ್ಟೂ ಶಾಸಕರು ಒಳಗೆ ಹೋದರೆ ಕಾರ್ಯಕರ್ತರು ಆ ಕೆಲಸ ಮಾಡುತ್ತಾರೆ ಎಂಬ ಧೈರ್ಯ ನಮಗಿದೆ‘ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ವಿಚಾರಣೆಗೆ ಹಾಜರಾದ ಭರತ್ ಶೆಟ್ಟಿ
ಪ್ರತಿಭಟನಾ ಸಭೆಯ ನಂತರ ಭರತ್‌ ಶೆಟ್ಟಿ ಅವರು ಪಕ್ಷದ ಕೆಲವು ನಾಯಕರೊಂದಿಗೆ ಕಾವೂರು ಠಾಣೆಗೆ ತೆರಳಿದರು. ‘ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಭರತ್ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದೆ. ಅವರು ಇಂದು ವಿಚರಣೆಗೆ ಹಾಜರಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT