ಹೊರ ಜಿಲ್ಲೆಗಳಿಂದ ಉಜಿರೆ, ಮಂಗಳೂರು ಕಡೆ ಬರುವ ಎ.ಸಿ. ಹಾಗೂ ಸ್ಲೀಪರ್ ಬಸ್ಗಳು, ಕೊಟ್ಟಿಗೆಹಾರದ ಮೂಲಕ ಬರುವ ಲಾರಿಗಳು ಕೂಡಾ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಯಿತು. ಘಾಟಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಐದು ಕಿ.ಮೀ. ವರೆಗೆ ವಾಹನಗಳ ಸಾಲು ಕಂಡು ಬಂದಿದೆ. ಸಮಸ್ಯೆ ಪರಿಹರಿಸಲು, ಚಾರ್ಮಾಡಿ ಪೊಲೀಸ್ ಗೇಟ್ನಲ್ಲಿ ಕೊಟ್ಟಿಹಾರ ಕಡೆ ಹೋಗುವ ವಾಹನಗಳನ್ನು ನಿಲ್ಲಿಸಿ ಸರದಿ ಪ್ರಕಾರ ಬಿಡಲಾಯಿತು.