8ರಿಂದ 10 ಟ್ರ್ಯಾಕ್ಟರ್ ಕವಳೆ ಮುಳ್ಳನ್ನು ಕಡಿದು ತಂದು ಆಂಜನೇಯ ದೇವಸ್ಥಾನದ ಮುಂಭಾಗ 20 ಅಡಿ ಅಗಲ 30 ಅಡಿ ಉದ್ದ ಚೌಕ ಆಕಾರದಲ್ಲಿ 15ರಿಂದ 20 ಅಡಿ ಎತ್ತರದ ಮುಳ್ಳಿನ ರಾಶಿಯ ಗದ್ದುಗೆ ಸಿದ್ಧಪಡಿಸಲಾಯಿತು. ಕಂಚುಗಾರನಹಳ್ಳಿ ಗಡಿಭಾಗದಿಂದ ಬೇಟೆ ಮರವನ್ನು ಪೂಜಿಸಿ ಕಡಿದು ಶಂಕ, ಚಕ್ರ, ಜಾಗಟೆ, ಕೊಂಬು, ಕಹಳೆ, ತಮಟೆ ವಾದ್ಯಗಳ ಮೂಲಕ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೊತ್ತು ತರುತ್ತಾರೆ.