ನ್ಯಾಮತಿ: ಬಿಸಿಲಿನ ಝಳದಿಂದ ತತ್ತರಿಸಿದ ಜನತೆಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಸುರಿದ ಮಳೆ ತಂಪು ವಾತಾವರಣ ಉಂಟು ಮಾಡಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದು, ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ತಗ್ಗಿ ರೈತರು ಆತಂಕ ಪಡುವಂತ ಸಂದರ್ಭದಲ್ಲಿ ಬಂದಿರುವ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗುರುವಾರ ಸಂಜೆ ನ್ಯಾಮತಿ, ಸುರಹೊನ್ನೆ ಸೇರಿದಂತೆ ಗೋವಿನಕೋವಿ, ಚೀಲೂರು, ಸವಳಂಗ, ಜೀನಹಳ್ಳಿ, ಬೆಳಗುತ್ತಿ, ಯರಗನಾಳ್, ರಾಮೇಶ್ವರ, ಗುಡ್ಡೇಹಳ್ಳಿ, ಚಿನ್ನಿಕಟ್ಟೆ, ಕತ್ತಿಗೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆ ಆಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಮಹಿಳೆ
ನ್ಯಾಮತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಸವಾರರು ರಸ್ತೆ ಬದಿ ಬೈಕ್ ನಿಲ್ಲಿಸಿ ಮಳೆಯಿಂದ ರಕ್ಷಣೆ ಪಡೆದರು