<p><strong>ಹರಿಹರ</strong>: ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಜನಹಳ್ಳಿಯಿಂದ ಬಿಳಸನೂರು (ರಾಷ್ಟ್ರೀಯ ಹೆದ್ದಾರಿ- ಕೋಣನತಲೆ ರಸ್ತೆಯ ಭಾಗ) ಮಾರ್ಗದಲ್ಲಿ ಡಾಂಬರು ಕಿತ್ತು ಹೋಗಿ, ಸಂಪೂರ್ಣ ಗುಂಡಿಮಯವಾಗಿದೆ. ಇಲ್ಲಿ ವಾಹನಗಳ ಸಂಚಾರವೇ ದುಸ್ತರವಾಗಿದೆ. </p>.<p>ರಾಷ್ಟ್ರೀಯ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವರೆಗೆ 11 ಮೀ. ಅಗಲದ ಸಿ.ಸಿ. ರಸ್ತೆಯಾಗಿ ಅಭಿವೃದ್ಧಿ ಹೊಂದಿದೆ. ನಂತರದ ಬಿಳಸನೂರು ಗ್ರಾಮದವರೆಗಿನ ರಸ್ತೆ ಈಗಲೂ 3.75 ಮೀಟರ್ ಅಗಲವಿದ್ದು, ಹಲವು ವರ್ಷಗಳ ಹಿಂದೆಯೇ ಡಾಂಬರು ಕಿತ್ತು ಹೋಗಿದೆ.</p>.<p>ಈ ರಸ್ತೆಯಲ್ಲಿ 2 ಕಿ.ಮೀ.ವರೆಗೆ ಗುಂಡಿಮಯವಾಗಿದೆ. ಗುಂಡಿಗಳು ದೊಡ್ಡ ಗಾತ್ರದಲ್ಲಿ ಇರುವುದರಿಂದ ಬೈಕ್, ಕಾರು ಒತ್ತಟ್ಟಿಗಿರಲಿ ದೊಡ್ಡ ವಾಹನಗಳಾದ ಬಸ್, ಲಾರಿಗಳು ಸಂಚರಿಸುವುದೇ ದೊಡ್ಡ ಸವಾಲಾಗಿದೆ.</p>.<p>ಈಗ ಮಳೆ ಸುರಿಯುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು, ಸಂಚಾರ ಮತ್ತಷ್ಟು ಕ್ಲಿಷ್ಟಕರವಾಗಿದೆ. ಈ ಭಾಗದ ಜನರು ಬೈಕ್, ಕಾರ್ಗಳಲ್ಲಿ ಓಡಾಡುವ ತಮ್ಮ ಕುಟುಂಬದ ಸದಸ್ಯರು ಮನೆಗೆ ತಲುಪುವವರೆಗೂ ಆತಂಕದಲ್ಲಿರುವಂತೆ ಮಾಡಿದೆ. </p>.<p><strong>ಇದೇ ಪ್ರಮುಖ ರಸ್ತೆ:</strong></p>.<p>ಈ ಭಾಗದ ಗ್ರಾಮಗಳಾದ ಬಿಳಸನೂರು, ತಿಮ್ಲಾಪುರ, ಎರೆಹೊಸಳ್ಳಿ, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ವಾಸನ, ಕಮಲಾಪುರ, ನಂದಿಗುಡಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ತಾಲ್ಲೂಕು ಕೇಂದ್ರ ಹರಿಹರಕ್ಕೆ ಬಂದು ಹೋಗಲು ಇದೇ ಹತ್ತಿರದ ರಸ್ತೆಯಾಗಿದೆ. </p>.<p><strong>ಮರಳಿನ ಲಾರಿ ಸಂಚಾರ:</strong> </p>.<p>ವಿದ್ಯಾರ್ಥಿಗಳು, ನೌಕರರು, ರೈತರು, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ನದಿ ದಡದ ಗ್ರಾಮಗಳಿಂದ ಮರಳು, ರೈತರ ಉತ್ಪನ್ನ ಸಾಗಣೆಗೂ ಈ ರಸ್ತೆಯೇ ಆಧಾರವಾಗಿದೆ. ಹೀಗಾಗಿ ಗುಂಡಿಗಳಿಗೆ ಗ್ರಾವೆಲ್ ಹಾಕಿದರೆ ಸಾಲದು, ರಸ್ತೆಯನ್ನು ವಿಸ್ತರಿಸಿ ಉತ್ತಮ ಗುಣಮಟ್ಟದ ಡಾಂಬರು ಹಾಕಬೇಕಿದೆ. ಇಲ್ಲವೇ ಸಿ.ಸಿ. ರಸ್ತೆ ಮಾಡುವುದೇ ಸಮಸ್ಯೆಗೆ ಪರಿಹಾರವಾಗಿದೆ ಎಂಬುದು ಸಾರ್ವಜನಿಕರ ಸಲಹೆಯಾಗಿದೆ.</p>.<div><blockquote>ಹಲವು ವರ್ಷಗಳ ಹಿಂದೆಯೇ ರಸ್ತೆ ಹಾಳಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ </blockquote><span class="attribution">ತಾಟೇರ್ ಬಾಬು ರೆಡ್ಡಿ, ಬಿಳಸನೂರು ನಿವಾಸಿ</span></div>.<div><blockquote>ತಳಮಟ್ಟದಲ್ಲಿರುವ ಈ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಿದೆ. ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ.</blockquote><span class="attribution">ಮರಿಸ್ವಾಮಿ, ಎಇಇ, ಪಿಡಬ್ಲ್ಯೂಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಜನಹಳ್ಳಿಯಿಂದ ಬಿಳಸನೂರು (ರಾಷ್ಟ್ರೀಯ ಹೆದ್ದಾರಿ- ಕೋಣನತಲೆ ರಸ್ತೆಯ ಭಾಗ) ಮಾರ್ಗದಲ್ಲಿ ಡಾಂಬರು ಕಿತ್ತು ಹೋಗಿ, ಸಂಪೂರ್ಣ ಗುಂಡಿಮಯವಾಗಿದೆ. ಇಲ್ಲಿ ವಾಹನಗಳ ಸಂಚಾರವೇ ದುಸ್ತರವಾಗಿದೆ. </p>.<p>ರಾಷ್ಟ್ರೀಯ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವರೆಗೆ 11 ಮೀ. ಅಗಲದ ಸಿ.ಸಿ. ರಸ್ತೆಯಾಗಿ ಅಭಿವೃದ್ಧಿ ಹೊಂದಿದೆ. ನಂತರದ ಬಿಳಸನೂರು ಗ್ರಾಮದವರೆಗಿನ ರಸ್ತೆ ಈಗಲೂ 3.75 ಮೀಟರ್ ಅಗಲವಿದ್ದು, ಹಲವು ವರ್ಷಗಳ ಹಿಂದೆಯೇ ಡಾಂಬರು ಕಿತ್ತು ಹೋಗಿದೆ.</p>.<p>ಈ ರಸ್ತೆಯಲ್ಲಿ 2 ಕಿ.ಮೀ.ವರೆಗೆ ಗುಂಡಿಮಯವಾಗಿದೆ. ಗುಂಡಿಗಳು ದೊಡ್ಡ ಗಾತ್ರದಲ್ಲಿ ಇರುವುದರಿಂದ ಬೈಕ್, ಕಾರು ಒತ್ತಟ್ಟಿಗಿರಲಿ ದೊಡ್ಡ ವಾಹನಗಳಾದ ಬಸ್, ಲಾರಿಗಳು ಸಂಚರಿಸುವುದೇ ದೊಡ್ಡ ಸವಾಲಾಗಿದೆ.</p>.<p>ಈಗ ಮಳೆ ಸುರಿಯುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು, ಸಂಚಾರ ಮತ್ತಷ್ಟು ಕ್ಲಿಷ್ಟಕರವಾಗಿದೆ. ಈ ಭಾಗದ ಜನರು ಬೈಕ್, ಕಾರ್ಗಳಲ್ಲಿ ಓಡಾಡುವ ತಮ್ಮ ಕುಟುಂಬದ ಸದಸ್ಯರು ಮನೆಗೆ ತಲುಪುವವರೆಗೂ ಆತಂಕದಲ್ಲಿರುವಂತೆ ಮಾಡಿದೆ. </p>.<p><strong>ಇದೇ ಪ್ರಮುಖ ರಸ್ತೆ:</strong></p>.<p>ಈ ಭಾಗದ ಗ್ರಾಮಗಳಾದ ಬಿಳಸನೂರು, ತಿಮ್ಲಾಪುರ, ಎರೆಹೊಸಳ್ಳಿ, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ವಾಸನ, ಕಮಲಾಪುರ, ನಂದಿಗುಡಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ತಾಲ್ಲೂಕು ಕೇಂದ್ರ ಹರಿಹರಕ್ಕೆ ಬಂದು ಹೋಗಲು ಇದೇ ಹತ್ತಿರದ ರಸ್ತೆಯಾಗಿದೆ. </p>.<p><strong>ಮರಳಿನ ಲಾರಿ ಸಂಚಾರ:</strong> </p>.<p>ವಿದ್ಯಾರ್ಥಿಗಳು, ನೌಕರರು, ರೈತರು, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ನದಿ ದಡದ ಗ್ರಾಮಗಳಿಂದ ಮರಳು, ರೈತರ ಉತ್ಪನ್ನ ಸಾಗಣೆಗೂ ಈ ರಸ್ತೆಯೇ ಆಧಾರವಾಗಿದೆ. ಹೀಗಾಗಿ ಗುಂಡಿಗಳಿಗೆ ಗ್ರಾವೆಲ್ ಹಾಕಿದರೆ ಸಾಲದು, ರಸ್ತೆಯನ್ನು ವಿಸ್ತರಿಸಿ ಉತ್ತಮ ಗುಣಮಟ್ಟದ ಡಾಂಬರು ಹಾಕಬೇಕಿದೆ. ಇಲ್ಲವೇ ಸಿ.ಸಿ. ರಸ್ತೆ ಮಾಡುವುದೇ ಸಮಸ್ಯೆಗೆ ಪರಿಹಾರವಾಗಿದೆ ಎಂಬುದು ಸಾರ್ವಜನಿಕರ ಸಲಹೆಯಾಗಿದೆ.</p>.<div><blockquote>ಹಲವು ವರ್ಷಗಳ ಹಿಂದೆಯೇ ರಸ್ತೆ ಹಾಳಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ </blockquote><span class="attribution">ತಾಟೇರ್ ಬಾಬು ರೆಡ್ಡಿ, ಬಿಳಸನೂರು ನಿವಾಸಿ</span></div>.<div><blockquote>ತಳಮಟ್ಟದಲ್ಲಿರುವ ಈ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಿದೆ. ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ.</blockquote><span class="attribution">ಮರಿಸ್ವಾಮಿ, ಎಇಇ, ಪಿಡಬ್ಲ್ಯೂಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>