ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕಾ ಶಿಬಿರಕ್ಕೆ ಶಾಮನೂರು ಶಿವಶಂಕರಪ್ಪ ಭೇಟಿ

Last Updated 20 ಜೂನ್ 2021, 5:15 IST
ಅಕ್ಷರ ಗಾತ್ರ

ದಾವಣಗೆರೆ: ಗುರು ರಾಜೇಂದ್ರ ಗುರುಮಂಡಲ್ ಮತ್ತು ರಿದ್ದಿ-ಸಿದ್ದಿ ಪೌಂಢೇಶನ್ ವತಿಯಿಂದ ದಾವಣಗೆರೆಯ ಕಾಯಿಪೇಟೆಯ ಸಂಕೇಶ್ವರ ಗುರುಮಂದಿರದಲ್ಲಿ ನಡೆದ ಲಸಿಕಾ ಶಿಬಿರಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿ ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು.

‘ಸರ್ಕಾರದಿಂದ ಲಸಿಕೆ ಸಮರ್ಪಕವಾಗಿ ವಿತರಿಸದ ಕಾರಣ ನಾವೇ ದಾವಣಗೆರೆ ಜನರ ಜೀವ ಉಳಿಸಲು ಲಸಿಕೆ ತರಿಸಿದೆವು. ಇದೀಗ ಸುಮಾರು ೧೦ ಸಾವಿರ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯ ಜಿ.ಎಸ್. ಮಂಜುನಾಥ್, ಸಂಕೇಶ್ವರ ಗುರುಮಂದಿರದ ಉಪಾಧ್ಯಕ್ಷ ಪೂನಮ್ ಚಂದ್, ಗುರು ರಾಜೇಂದ್ರ ಗುರುಮಂಡಲ್ ಅಧ್ಯಕ್ಷರು, ರಿದ್ದಿ-ಸಿದ್ದಿ ಪೌಂಢೇಶನ್ ಕಾರ‍್ಯದರ್ಶಿ ರಾಜು ಭಂಡಾರಿ, ಮಹಾವೀರ, ಅನಿಲ್, ಸುನೀಲ್ ಓಸ್ವಾಲ್, ವಿಜಯಕುಮಾರ, ವಿಕ್ಕಿ, ಜಿತೇಂದ್ರ, ಕಿಶೋರ್, ಮುಖೇಶ್ ಭಂಡಾರಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT