<p><strong>ಚೀಲೂರು (ನ್ಯಾಮತಿ):</strong> ತಾಲ್ಲೂಕಿನ ಚೀಲೂರು ಬಸವೇಶ್ವರ ನಗರದಲ್ಲಿ ನಿರ್ಮಾಣ ಹಂತದ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಕರಡಿಯನ್ನು ಮನೆಯಲ್ಲಿದ್ದ ಮಹಿಳೆ ದಿಟ್ಟತನದಿಂದ ಓಡಿಸಿದ ಘಟನೆ ನಡೆದಿದೆ. </p>.<p>ಬಸವೇಶ್ವರ ನಗರದ ಚಿಕ್ಕ ಚಾನಲ್ ಬಳಿ ನಿರ್ಮಾಣ ಹಂತದ ಮನೆಯಲ್ಲಿ ತಂಗಮ್ಮ ಮಲಗಿದ್ದರು. ಈ ವೇಳೆ ಮನೆಗೆ ಕರಡಿ ನುಗ್ಗಿದ್ದು, ಅದನ್ನು ಓಡಿಸಲು ಮುಂದಾದಾಗ ದಾಳಿಗೆ ಯತ್ನಿಸಿದೆ. </p>.<p>‘ಖಾಲಿ ಬಾಟಲಿಯೊಳಗೆ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ ಬಂದೂಕಿನಿಂದ ಹಾರಿಸಿದ ಗುಂಡಿನ ಸದ್ದಿನಂತೆ ಶಬ್ಧ ಮಾಡಿದ್ದರಿಂದ ಬೆದರಿದ ಕರಡಿ ಓಡಿ ಹೋಯಿತು. ನನ್ನ ಪ್ರಾಣ ಉಳಿಯಿತು’ ಎಂದು ತಂಗಮ್ಮ ತಿಳಿಸಿದ್ದಾರೆ. </p>.<p>ಸಾಮಾಜಿಕ ಕಾರ್ಯಕರ್ತರಾದ ಪುರುವಂತರ ಪರಮೇಶ್ವರಪ್ಪ ಮತ್ತು ಪಿ.ಜಿ.ಗೌಡ ಅವರು ಅರಣ್ಯ ಇಲಾಖೆಯ ಕಿಶೋರಕುಮಾರ ಮತ್ತು ಭರ್ಕತ್ ಅಲಿ ಅವರ ಗಮನಕ್ಕೆ ತಂದಿದ್ದಾರೆ. ವನಪಾಲಕರಾದ ತಿಪ್ಪೇಶ, ಪ್ರಶಾಂತ, ಶಿವರಾಜ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. </p>.<p>‘ಈ ಹಿಂದೆ ಕರಡಿಯನ್ನು ಕಂಡಿದ್ದಾಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದೆ. ಕರಡಿ ಇಲ್ಲಿಯೇ ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿದೆ’ ಎಂದು ಪುರುವಂತರ ಪರಮೇಶ್ವರಪ್ಪ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೀಲೂರು (ನ್ಯಾಮತಿ):</strong> ತಾಲ್ಲೂಕಿನ ಚೀಲೂರು ಬಸವೇಶ್ವರ ನಗರದಲ್ಲಿ ನಿರ್ಮಾಣ ಹಂತದ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಕರಡಿಯನ್ನು ಮನೆಯಲ್ಲಿದ್ದ ಮಹಿಳೆ ದಿಟ್ಟತನದಿಂದ ಓಡಿಸಿದ ಘಟನೆ ನಡೆದಿದೆ. </p>.<p>ಬಸವೇಶ್ವರ ನಗರದ ಚಿಕ್ಕ ಚಾನಲ್ ಬಳಿ ನಿರ್ಮಾಣ ಹಂತದ ಮನೆಯಲ್ಲಿ ತಂಗಮ್ಮ ಮಲಗಿದ್ದರು. ಈ ವೇಳೆ ಮನೆಗೆ ಕರಡಿ ನುಗ್ಗಿದ್ದು, ಅದನ್ನು ಓಡಿಸಲು ಮುಂದಾದಾಗ ದಾಳಿಗೆ ಯತ್ನಿಸಿದೆ. </p>.<p>‘ಖಾಲಿ ಬಾಟಲಿಯೊಳಗೆ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ ಬಂದೂಕಿನಿಂದ ಹಾರಿಸಿದ ಗುಂಡಿನ ಸದ್ದಿನಂತೆ ಶಬ್ಧ ಮಾಡಿದ್ದರಿಂದ ಬೆದರಿದ ಕರಡಿ ಓಡಿ ಹೋಯಿತು. ನನ್ನ ಪ್ರಾಣ ಉಳಿಯಿತು’ ಎಂದು ತಂಗಮ್ಮ ತಿಳಿಸಿದ್ದಾರೆ. </p>.<p>ಸಾಮಾಜಿಕ ಕಾರ್ಯಕರ್ತರಾದ ಪುರುವಂತರ ಪರಮೇಶ್ವರಪ್ಪ ಮತ್ತು ಪಿ.ಜಿ.ಗೌಡ ಅವರು ಅರಣ್ಯ ಇಲಾಖೆಯ ಕಿಶೋರಕುಮಾರ ಮತ್ತು ಭರ್ಕತ್ ಅಲಿ ಅವರ ಗಮನಕ್ಕೆ ತಂದಿದ್ದಾರೆ. ವನಪಾಲಕರಾದ ತಿಪ್ಪೇಶ, ಪ್ರಶಾಂತ, ಶಿವರಾಜ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. </p>.<p>‘ಈ ಹಿಂದೆ ಕರಡಿಯನ್ನು ಕಂಡಿದ್ದಾಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದೆ. ಕರಡಿ ಇಲ್ಲಿಯೇ ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿದೆ’ ಎಂದು ಪುರುವಂತರ ಪರಮೇಶ್ವರಪ್ಪ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>