ಡಾ. ಶಿವಾನಂದ ಶೆಟ್ಟರ ಮಾತನಾಡಿ, ‘ಕೃತಿಯ ಹದಿಮೂರು ಅಧ್ಯಾಯಗಳು ಸಂಶೋಧನೆ ಮತ್ತು ವಿದ್ವತ್ತು ಒಳಗೊಂಡ, ಹೊಸ ತಲೆಮಾರಿಗೆ ಮಾದರಿಯಾಗಬಲ್ಲ ಕೃತಿಯಾಗಿದೆ. ನಂದಿಮಠ ಅವರ ಕೃತಿಯಲ್ಲಿ ದಾಖಲಾಗಿರುವ ತಪ್ಪುಗಳನ್ನು ಸೂಕ್ತ ದಾಖಲೆಗಳ ಮೂಲಕ ವಿಶ್ಲೇಷಿಸುತ್ತಾ ಕೇಶಿರಾಜ, ರಾಘವಾಂಕ, ಭೀಮಕವಿ, ಚಾಮರಸ, ಮುಂತಾದವರ ಸಾಹಿತ್ಯದ ಉದಾಹರಣೆಗಳ ಮೂಲಕ ಮರೆಯಾದ ಇತಿಹಾಸವನ್ನು ದಾಖಲಿಸಿದೆ. ಪುರಾಣಗಳಲ್ಲಿ ಅಡಕವಾಗಿರುವ ಹುಸಿ ವೈಭವೀಕರಣವನ್ನು ಅಲ್ಲಗಳಿಯುವ ಸಂಶೋಧನಾ ಕೃತಿಯಾಗಿದೆ’ ಎಂದರು.