<p><strong>ಧಾರವಾಡ:</strong> ‘ವಾರಂಟಿ’ ಇದ್ದರೂ ಎಲೆಕ್ಟ್ರಿಕ್ ಸ್ಕೂಟರ್ನ (ಇವಿ) ಬ್ಯಾಟರಿ ರಿಪೇರಿ ಮಾಡಿಕೊಡದ ಪ್ರಕರಣದಲ್ಲಿ ಟ್ರೈಯೋ ಗ್ರೂಪ್ಸ್ ಪ್ಯೂರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ತಿಂಗಳೊಳಗೆ ವಾಹನಕ್ಕೆ ಹೊಸ ಬ್ಯಾಟರಿ ಅಳವಡಿಸಿಕೊಡಬೇಕು ಎಂದು ಆದೇಶಿಸಿದರು.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು. ಹೊಸ ಬ್ಯಾಟರಿ ಅಳವಡಿಸಿ ರಿಪೇರಿ ಮಾಡಿಕೊಡಲು ತಪ್ಪಿದರೆ ಸ್ಕೂಟರ್ ಖರೀದಿ ಹಣ ₹ 80 ಸಾವಿರವನ್ನು ವಾಪಸ್ ನೀಡಬೇಕು ಆದೇಶದಲ್ಲಿ ತಿಳಿಸಿದ್ದಾರೆ.</p>.<h2>ಏನಿದು ಪ್ರಕರಣ?:</h2><h2></h2><p> ಧಾರವಾಡದ ಇಸ್ಮಾಯಿಲ್ ಮಾನಿಕ ಅವರು 2022 ಅಕ್ಟೋಬರ್ 25ರಂದು ಇವಿ ಸ್ಕೂಟರ್ ಖರೀದಿಸಿದ್ದರು. ಸ್ಕೂಟರ್ ವಾರಂಟಿ ಅವಧಿ ಐದು ವರ್ಷ ಇತ್ತು.</p>.<p>ಕೆಲ ದಿನಗಳಲ್ಲಿ ಸ್ಕೂಟರ್ನ ಬ್ಯಾಟರಿ ಕಾರ್ಯ ಸ್ಥಗಿತವಾಗಿತ್ತು. ಮೈಲೇಜ್ ಬಹಳ ಕಡಿಮೆಯಾಗಿತ್ತು. ವಾಹನದ ದೋಷವನ್ನು ಕಂಪನಿಯ ಗಮನಕ್ಕೆ ತಂದರೂ ಸರಿಪಡಿಸಿರಲಿಲ್ಲ. ಇಸ್ಮಾಯಿಲ್ ಅವರು 2024 ಆಗಸ್ಟ್ 20ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ವಾರಂಟಿ’ ಇದ್ದರೂ ಎಲೆಕ್ಟ್ರಿಕ್ ಸ್ಕೂಟರ್ನ (ಇವಿ) ಬ್ಯಾಟರಿ ರಿಪೇರಿ ಮಾಡಿಕೊಡದ ಪ್ರಕರಣದಲ್ಲಿ ಟ್ರೈಯೋ ಗ್ರೂಪ್ಸ್ ಪ್ಯೂರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ತಿಂಗಳೊಳಗೆ ವಾಹನಕ್ಕೆ ಹೊಸ ಬ್ಯಾಟರಿ ಅಳವಡಿಸಿಕೊಡಬೇಕು ಎಂದು ಆದೇಶಿಸಿದರು.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು. ಹೊಸ ಬ್ಯಾಟರಿ ಅಳವಡಿಸಿ ರಿಪೇರಿ ಮಾಡಿಕೊಡಲು ತಪ್ಪಿದರೆ ಸ್ಕೂಟರ್ ಖರೀದಿ ಹಣ ₹ 80 ಸಾವಿರವನ್ನು ವಾಪಸ್ ನೀಡಬೇಕು ಆದೇಶದಲ್ಲಿ ತಿಳಿಸಿದ್ದಾರೆ.</p>.<h2>ಏನಿದು ಪ್ರಕರಣ?:</h2><h2></h2><p> ಧಾರವಾಡದ ಇಸ್ಮಾಯಿಲ್ ಮಾನಿಕ ಅವರು 2022 ಅಕ್ಟೋಬರ್ 25ರಂದು ಇವಿ ಸ್ಕೂಟರ್ ಖರೀದಿಸಿದ್ದರು. ಸ್ಕೂಟರ್ ವಾರಂಟಿ ಅವಧಿ ಐದು ವರ್ಷ ಇತ್ತು.</p>.<p>ಕೆಲ ದಿನಗಳಲ್ಲಿ ಸ್ಕೂಟರ್ನ ಬ್ಯಾಟರಿ ಕಾರ್ಯ ಸ್ಥಗಿತವಾಗಿತ್ತು. ಮೈಲೇಜ್ ಬಹಳ ಕಡಿಮೆಯಾಗಿತ್ತು. ವಾಹನದ ದೋಷವನ್ನು ಕಂಪನಿಯ ಗಮನಕ್ಕೆ ತಂದರೂ ಸರಿಪಡಿಸಿರಲಿಲ್ಲ. ಇಸ್ಮಾಯಿಲ್ ಅವರು 2024 ಆಗಸ್ಟ್ 20ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>