‘ಕಾರ್ಯಕ್ರಮದಲ್ಲಿ ಪಂಡಿತ್ ಡಾ. ಎಂ.ವೇಂಕಟೇಶಕುಮಾರ್, ಉಸ್ತಾದ್ ಫಯಾಜ್ ಖಾನ್ ಅವರ ಗಾಯನ ಕಛೇರಿ ನಡೆಯಲಿದೆ. ಉಸ್ತಾದ್ ಹಮೀದ್ ಖಾನ್ ಹಾಗೂ ಡಾ. ಮೊಹಸೀನ್ ಖಾನ್ ಅವರ 28 ಶಿಷ್ಯರಿಂದ ‘ಅರ್ಪಣಾ’ ಎಂಬ ಸಿತಾರ್ ಮತ್ತು ತಬಲಾ ಕಾರ್ಯಕ್ರಮ ಜರುಗಲಿದೆ’ ಎಂದು ವಿವರಿಸಿದರು. ಮೊಹಸಿನ್ ಖಾನ್, ಹುಸೇನಸಾಬ ನದಾಫ, ಸಿ.ಎಸ್. ಹಿರೇಮಠ ಇದ್ದರು.