ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಚನ್ನಮ್ಮ ವೃತ್ತ–ಬಸವ ವನ ರಸ್ತೆ ಭಾಗಶಃ ಮುಕ್ತ: ಪ್ರಾಯೋಗಿಕ ಸಂಚಾರ

ಮೇಲ್ಸೇತುವೆ: ಡಾಂಬರ್‌ ರಸ್ತೆ ಬದಲು ಕಾಂಕ್ರಿಟ್‌ ರಸ್ತೆ ನಿರ್ಮಾಣ, ಖಾಸಗಿ ಬಸ್‌ಗಳಿಗಿಲ್ಲ ಪ್ರವೇಶ
Published : 1 ಸೆಪ್ಟೆಂಬರ್ 2025, 5:43 IST
Last Updated : 1 ಸೆಪ್ಟೆಂಬರ್ 2025, 5:43 IST
ಫಾಲೋ ಮಾಡಿ
Comments
ದಿವ್ಯ ಪ್ರಭು
ದಿವ್ಯ ಪ್ರಭು
ಸಾರಿಗೆ ಸಂಸ್ಥೆಯವರು ಈಗಾಗಲೇ ಪ್ರಾಯೋಗಿಕವಾಗಿ ಬಸ್‌ಗಳನ್ನು ಓಡಿಸಿ ಪರಿಶೀಲಿಸಿದ್ದಾರೆ. ಸಾಧಕ–ಬಾಧಕಗಳ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ರಸ್ತೆ ಮುಕ್ತಗೊಳಿಸಲಾಗುವುದು
ದಿವ್ಯಪ್ರಭು, ಜಿಲ್ಲಾಧಿಕಾರಿ
ರವೀಶ್‌ ಸಿ.ಆರ್‌.
ರವೀಶ್‌ ಸಿ.ಆರ್‌.
ಬಂದ್‌ ಆಗಿರುವ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ನಡೆಸಿ ಪರಿಶೀಲಿಸಲಾಗಿದೆ. ಒಮ್ಮೆ ರಸ್ತೆಯನ್ನು ಮುಕ್ತಗೊಳಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ
ರವೀಶ್‌ ಸಿ.ಆರ್‌. ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ
ಕಾಂಕ್ರಿಟ್‌ ರಸ್ತೆ ನಿರ್ಮಾಣ: ಶಾಸಕ
‘ಬಂದ್‌ ಆಗಿರುವ ರಸ್ತೆಯ ಭಾಗಶಃ ಭಾಗ ಮಾತ್ರ ಮುಕ್ತಗೊಳಿಸಿ ಉಳಿದ ಭಾಗದಲ್ಲಿ ಕಾಮಗಾರಿ ಮುಂದುವರಿಯಲಿದೆ. ಬಸವ ವನದ ಬಳಿ ಮೇಲ್ಸೇತುವೆಗೆ ಆರು ಗರ್ಡರ್‌ ಅಳವಡಿಕೆ ಬಾಕಿ ಇರುವುದರಿಂದ ಹುಬ್ಬಳ್ಳಿ ಆಪ್ಟಿಕಲ್ಸ್ ವರೆಗೆ ಮಾತ್ರ ರಸ್ತೆ ಮುಕ್ತಗೊಳಿಸಲಾಗುತ್ತದೆ. ಈ ಮೊದಲು ಡಾಂಬರು ರಸ್ತೆ ಮಾಡಲು ನಿರ್ಧರಿಸಲಾಗಿತ್ತು. ವಿಪರೀತ ವಾಹನಗಳು ಸಂಚರಿಸುವುದರಿಂದ ಕಾಂಕ್ರಿಟ್‌ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ‘ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರವೇ ಉಪನಗರ ಪೊಲೀಸ್‌ ಠಾಣೆ ಕಟ್ಟಡ ತೆರವು ಹಾಗೂ ಆ ಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT