ಕೊಯಮತ್ತೂರು ಹಾಗೂ ಪುಣೆಯ ಅತ್ಯಾಧುನಿಕ ತಳಿಗಳನ್ನು ರೈತ ಬಾಬುರಾವ್ ಪಾಟೀಲ ಅವರು ಸದ್ಯ ಹೊಲದಲ್ಲಿ ಬೆಳೆದಿದ್ದು, 9 ತಿಂಗಳು, 4 ತಿಂಗಳು, 1 ತಿಂಗಳು ಅವಧಿಯ ಕಬ್ಬಿನ ಬೆಳೆ ಕಾಣಬಹುದಾಗಿದೆ. ಹೀಗೆ ಒಬ್ಬರೊಬ್ಬರ ಹೊಲದಲ್ಲಿ ಒಂದೇ ಬೆಳೆ ಮೂರು ಹಂತದಲ್ಲಿರುವುದು ನೋಡಲು ಸಿಗುವುದು ವಿರಳ. ಆದರೆ ಬಾಬುರಾವ್ ಪಾಟೀಲ ಕಬ್ಬಿನ ಗದ್ದೆಯಲ್ಲಿ ಎಲ್ಲಾ ಹಂತದ ಕಬ್ಬು ಕಾಣಸಿಗುತ್ತದೆ. ಮನೆಗೆ ಅಗತ್ಯವಾದ ತರಕಾರಿಯೂ ಬೆಳೆಯುತ್ತಿದ್ದಾರೆ. ಚಿಕ್ಕ ರೈತರಿದ್ದರೆ ಅಂತಹವರು ಕಬ್ಬಿನ ನಡುವೆ ಮಿಶ್ರಬೆಳೆ ಬೇಸಾಯದ ಮೂಲಕ ಮೆಕ್ಕೆ ಜೋಳ ಬೆಳೆಯಬಹುದು ಇದರಿಂದಲೂ ಇಥೇನಾಲ್ ತಯಾರಿಸಲು ಅನುಕೂಲವಾಗುತ್ತದೆ ಎಂದು ರೈತ ಬಾಬುರಾವ್ ಪಾಟೀಲ ಹೇಳಿದರು.