‘ನುಲಿಗೆರಿ ಗ್ರಾಮದ ನಾಗೇಂದ್ರ, ಮುರುಗೇಶ, ವಿಠಲ ಮತ್ತು ಆನಂದ ಕಾರ್ವೆ ಎಂಬುವರು ಪತಿಗೆ ದೂರವಾಣಿ ಕರೆ ಮಾಡಿ ‘ಹಣ ತೆಗೆದುಕೊಂಡು ಬನ್ನಿ, ಪ್ರಕರಣವನ್ನು ರಾಜಿ ಮಾಡೋಣ’ ಎಂದು ಕಿರುಕುಳ ನೀಡುತ್ತಿದ್ದರು. ತಹಶೀಲ್ದಾರ್ ಅವರನ್ನು ಭೇಟಿ ಮಾಡಲು ಹೋದರೆಮಾತನಾಡಿಸದೆ ತೊಂದರೆ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಪತಿ ಶನಿವಾರಬೆಳಗ್ಗೆ 6 ಗಂಟೆಗೆ ತೀರ್ಥಹಳ್ಳಿ ಶಾಸಕರನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿತೆರಳಿದ್ದರು. ಬೆಳಗ್ಗೆ 10ಗಂಟೆಗೆ ನನ್ನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಮಾಡಿ, ‘ನನಗೆ ಬೇಜಾರಾಗಿದೆ, ನಾನು ಬರುವುದಿಲ್ಲ. ಬೇಜಾರು ಮಾಡಿಕೊಳ್ಳಬೇಡ, ಮುಡುಬ ಸೇತುವೆ ಬಳಿ ಇದ್ದೇನೆ. ನೀವು ಇಲ್ಲಿಗೆ ಬನ್ನಿ’ ಎಂದು ಕರೆ ಸ್ಥಗಿತಗೊಳಿಸಿದ್ದರು. ನಾವು ಸ್ಥಳಕ್ಕೆ ಹೋದಾಗನದಿಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.