<p><strong>ಬಾಗಲಕೋಟೆ</strong>: ಮುದುಡು ರೋಗ ನಿರೋಧಕ ಶಕ್ತಿ ಹೊಂದಿರುವ ಟೊಮೆಟೊದ ನಾಲ್ಕು ಹೊಸ ತಳಿಗಳನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. </p>.<p>ಮುದುಡು ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಎಲೆ ಸಣ್ಣದಿರುವಾಗ ರೋಗ ಬಂದರೆ ಗಿಡಗಳ ಬೆಳವಣಿಗೆಯು ಕುಂಠಿತವಾಗಲಿದೆ. ಜೊತೆಗೆ, ಇಳುವರಿಯೂ ಕಡಿಮೆಯಾಗುತ್ತದೆ. ಇದರಿಂದ ಖರ್ಚು ಹೆಚ್ಚಾಗಿ, ಆದಾಯ ಕಡಿಮೆಯಾಗುತ್ತದೆ. </p>.<p>‘ವಿಶ್ವವಿದ್ಯಾಲಯವು ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೋಗ ನಿರೋಧಕ ಶಕ್ತಿಯುಳ್ಳ ‘ಕೃಷ್ಣಪ್ರಭಾ ಶಾಲ್ಮಲಾ’, ‘ಕೃಷ್ಣಪ್ರಭಾ ಬಾರಿ’, ‘ಕೃಷ್ಣಪ್ರಭಾ ತುಂಗಾ’ ಮತ್ತು ‘ಕೃಷ್ಣಪ್ರಭಾ ಶಾಂತ’ ಎಂಬ ತಳಿಗಳನ್ನು ಅಭಿವೃದ್ಧಿಪಡಿಸಿದೆ’ ಎಂದು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಫಕ್ರುದ್ದೀನ್ ತಿಳಿಸಿದರು.</p>.<p>‘ಹಲವು ಟೊಮೆಟೊ ತಳಿಗಳ ಬೀಜಗಳನ್ನು ಪ್ರತಿ ಬಾರಿ ಬೆಳೆಸಲು ಮಾರುಕಟ್ಟೆಯಲ್ಲಿ ಕೊಂಡು ತರಬೇಕು. ಆದರೆ, ಈ ತಳಿಗಳನ್ನು ಬೆಳೆದರೆ, ಮುಂದಿನ ಸಲಕ್ಕೆ ಬೀಜವಾಗಿ ಬಳಸಬಹುದು. ಬಿತ್ತನೆ ಬೀಜದ ಖರೀದಿ ವೆಚ್ಚ ಕಡಿಮೆಯಾಗುತ್ತದೆ. ರೈತರೇ ಉತ್ಪಾದಿಸಿರುವುದರಿಂದ ಗುಣಮಟ್ಟದ ಬೀಜಗಳೂ ಲಭ್ಯವಾಗುತ್ತವೆ’ ಎಂದರು.</p>.<p>‘ಹಲವಾರು ಹಂತಗಳ ಪರೀಕ್ಷೆಯ ನಂತರ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ, ರೈತರು ಬೆಳೆಯಲಾರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ತಿಳಿಸಿದರು.</p>.<p><strong>ಹುಳಿ ಹೆಚ್ಚು:</strong> ‘ಕೃಷ್ಣಪ್ರಭಾ ಬಾರಿ’ ತಳಿಯು ಹೆಚ್ಚಿನ ಹುಳಿ ಅಂಶವನ್ನು ಹೊಂದಿದೆ. ಇದು ‘ಟೊಮೆಟೊ ಕರಿ’ ತಯಾರಿಸಲು ಹೇಳಿ ಮಾಡಿಸಿದಂತಹ ತಳಿ. </p>.<p><strong>ಸಾಂಬಾರಿಗೆ ಸೂಕ್ತ:</strong> ‘ಕೃಷ್ಣಪ್ರಭಾ ತುಂಗಾ’ ತಳಿಯೂ ಸಾಂಬಾರಿನ ರುಚಿ ಹೆಚ್ಚಿಸುವ ತಳಿಯಾಗಿದೆ. ಇದು ಹೆಚ್ಚು ಇಳುವರಿ ನೀಡುತ್ತದೆ. ಪ್ರತಿ ಗಿಡಕ್ಕೆ 50 ರಿಂದ 55 ಟೊಮೆಟೊಗಳನ್ನು ಬಿಡುತ್ತದೆ.</p>.<p>‘ಕೃಷ್ಣಪ್ರಭಾ ಶಾಂತ’ ತಳಿಯು ಮುಂಗಾರು, ಹಿಂಗಾರು ಅವಧಿಗೂ ಸೂಕ್ತವಾಗಿದೆ. ಮಳೆಯಾಶ್ರಿತ, ನೀರಾವರಿ ಪ್ರದೇಶದಲ್ಲಿಯೂ ಇದನ್ನು ಬೆಳೆಯಬಹುದು. </p>.<div><blockquote>ಹೊಸ ತಳಿ ಪರಿಚಯಿಸುವ ಮೂಲಕ ರೈತರ ಸಮಸ್ಯೆಗಳಿಗೆ ವಿ.ವಿಯು ಸ್ಪಂದಿಸುತ್ತಿದೆ. ಹೊಸ ತಳಿಗಳ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದೆ.</blockquote><span class="attribution">ವಿಷ್ಣುವರ್ಧನ, ಕುಲಪತಿ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಮುದುಡು ರೋಗ ನಿರೋಧಕ ಶಕ್ತಿ ಹೊಂದಿರುವ ಟೊಮೆಟೊದ ನಾಲ್ಕು ಹೊಸ ತಳಿಗಳನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. </p>.<p>ಮುದುಡು ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಎಲೆ ಸಣ್ಣದಿರುವಾಗ ರೋಗ ಬಂದರೆ ಗಿಡಗಳ ಬೆಳವಣಿಗೆಯು ಕುಂಠಿತವಾಗಲಿದೆ. ಜೊತೆಗೆ, ಇಳುವರಿಯೂ ಕಡಿಮೆಯಾಗುತ್ತದೆ. ಇದರಿಂದ ಖರ್ಚು ಹೆಚ್ಚಾಗಿ, ಆದಾಯ ಕಡಿಮೆಯಾಗುತ್ತದೆ. </p>.<p>‘ವಿಶ್ವವಿದ್ಯಾಲಯವು ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೋಗ ನಿರೋಧಕ ಶಕ್ತಿಯುಳ್ಳ ‘ಕೃಷ್ಣಪ್ರಭಾ ಶಾಲ್ಮಲಾ’, ‘ಕೃಷ್ಣಪ್ರಭಾ ಬಾರಿ’, ‘ಕೃಷ್ಣಪ್ರಭಾ ತುಂಗಾ’ ಮತ್ತು ‘ಕೃಷ್ಣಪ್ರಭಾ ಶಾಂತ’ ಎಂಬ ತಳಿಗಳನ್ನು ಅಭಿವೃದ್ಧಿಪಡಿಸಿದೆ’ ಎಂದು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಫಕ್ರುದ್ದೀನ್ ತಿಳಿಸಿದರು.</p>.<p>‘ಹಲವು ಟೊಮೆಟೊ ತಳಿಗಳ ಬೀಜಗಳನ್ನು ಪ್ರತಿ ಬಾರಿ ಬೆಳೆಸಲು ಮಾರುಕಟ್ಟೆಯಲ್ಲಿ ಕೊಂಡು ತರಬೇಕು. ಆದರೆ, ಈ ತಳಿಗಳನ್ನು ಬೆಳೆದರೆ, ಮುಂದಿನ ಸಲಕ್ಕೆ ಬೀಜವಾಗಿ ಬಳಸಬಹುದು. ಬಿತ್ತನೆ ಬೀಜದ ಖರೀದಿ ವೆಚ್ಚ ಕಡಿಮೆಯಾಗುತ್ತದೆ. ರೈತರೇ ಉತ್ಪಾದಿಸಿರುವುದರಿಂದ ಗುಣಮಟ್ಟದ ಬೀಜಗಳೂ ಲಭ್ಯವಾಗುತ್ತವೆ’ ಎಂದರು.</p>.<p>‘ಹಲವಾರು ಹಂತಗಳ ಪರೀಕ್ಷೆಯ ನಂತರ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ, ರೈತರು ಬೆಳೆಯಲಾರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ತಿಳಿಸಿದರು.</p>.<p><strong>ಹುಳಿ ಹೆಚ್ಚು:</strong> ‘ಕೃಷ್ಣಪ್ರಭಾ ಬಾರಿ’ ತಳಿಯು ಹೆಚ್ಚಿನ ಹುಳಿ ಅಂಶವನ್ನು ಹೊಂದಿದೆ. ಇದು ‘ಟೊಮೆಟೊ ಕರಿ’ ತಯಾರಿಸಲು ಹೇಳಿ ಮಾಡಿಸಿದಂತಹ ತಳಿ. </p>.<p><strong>ಸಾಂಬಾರಿಗೆ ಸೂಕ್ತ:</strong> ‘ಕೃಷ್ಣಪ್ರಭಾ ತುಂಗಾ’ ತಳಿಯೂ ಸಾಂಬಾರಿನ ರುಚಿ ಹೆಚ್ಚಿಸುವ ತಳಿಯಾಗಿದೆ. ಇದು ಹೆಚ್ಚು ಇಳುವರಿ ನೀಡುತ್ತದೆ. ಪ್ರತಿ ಗಿಡಕ್ಕೆ 50 ರಿಂದ 55 ಟೊಮೆಟೊಗಳನ್ನು ಬಿಡುತ್ತದೆ.</p>.<p>‘ಕೃಷ್ಣಪ್ರಭಾ ಶಾಂತ’ ತಳಿಯು ಮುಂಗಾರು, ಹಿಂಗಾರು ಅವಧಿಗೂ ಸೂಕ್ತವಾಗಿದೆ. ಮಳೆಯಾಶ್ರಿತ, ನೀರಾವರಿ ಪ್ರದೇಶದಲ್ಲಿಯೂ ಇದನ್ನು ಬೆಳೆಯಬಹುದು. </p>.<div><blockquote>ಹೊಸ ತಳಿ ಪರಿಚಯಿಸುವ ಮೂಲಕ ರೈತರ ಸಮಸ್ಯೆಗಳಿಗೆ ವಿ.ವಿಯು ಸ್ಪಂದಿಸುತ್ತಿದೆ. ಹೊಸ ತಳಿಗಳ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದೆ.</blockquote><span class="attribution">ವಿಷ್ಣುವರ್ಧನ, ಕುಲಪತಿ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>