ಮನವಿಗೆ ಸ್ಪಂದಿಸಿದ ಸಚಿವ ಪಾಟೀಲರು ಮನೆ ದುರಸ್ತಿಗೆ ಅವಕಾಶವಿಲ್ಲ. ಆದರೆ ನೀರು ನುಗ್ಗದಂತೆ ಎಲ್ಲ ಕ್ರಮ ವಹಿಸಿ, ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಂದ್ರ, ಡಿಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಎಂಜನಿಯರ್ ಎಂ.ಡಿ.ತೋಗುಣಸಿ, ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕುರ್ತಕೋಟಿ, ಪಿಡಿಒ ಸಂಕನಗೌಡ್ರ, ಬಾಬು ಹಿರೇಹೊಳಿ, ಕೆಂಪನಗೌಡ್ರ, ವಿರೂಪಾಕ್ಷಪ್ಪ ಹಿರೇಹೊಳಿ, ಉಮೇಶ ಮಾನೆ, ಕೃಷ್ಣಪ್ಪ ಚವ್ಹಾಣ, ಹನಮಂತಗೌಡ ಪಾಟೀಲ, ಬಸವರಾಜ ಮಾನೆ ಹಾಗೂ ಗ್ರಾಮಸ್ಥರು ಇದ್ದರು.