<p><strong>ಮುಳಗುಂದ:</strong> ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಬರ ಎದುರಾಗಿದೆ. ಎರಡ್ಮೂರು ತಿಂಗಳಿಂದ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಮನೆಯಲ್ಲಿ ಎರಡ್ಮೂರು ದಿನಗಳಿಗೆ ಬಳಕೆ ಆಗುವಷ್ಟು ನೀರು ಸಂಗ್ರಹ ಇರುತ್ತದೆ. ಆದರೆ, 8-10 ದಿನಗಳಾದರೂ ನೀರು ಬರದಿದ್ದಾಗ ದೇವರೇ ನಮ್ಮನ್ನು ಕಾಪಾಡಬೇಕಿದೆ...</p>.<p>– ಹೀಗೆ ಆಕ್ರೋಶಭರಿತ ಅಸಹಾಯಕ ಧ್ವನಿಯಲ್ಲಿ ಹೇಳಿದರು ಸ್ಥಳೀಯರಾದ ಮಹಾಂತೇಶ.</p>.<p>‘ಹತ್ತಿರದಲ್ಲಿ ಬಾವಿ, ಕೆರೆ ಇಲ್ಲ. ನಿಯಮಿತವಾಗಿ ನೀರು ಪೂರೈಸದಿದ್ದರೆ ನಾವು ಎಲ್ಲಿಗೆ ಹೋಗೋದು. ಸ್ಥಳಿಯ ಪಟ್ಟಣ ಪಂಚಾಯಿತಿ ನೀರು ಪೂರೈಕೆಯಲ್ಲಿ ಪದೆಪದೇ ನಿರ್ಲಕ್ಷ್ಯ ವಹಿಸುತ್ತಿದೆ. ತುಂಗಭದ್ರ ನೀರು ಸಹ ಇಲ್ಲದಾಗಿದೆ’ ಎಂದು ಕಿಡಿಕಾರಿದರು.</p>.<p>ಕೆಲವು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕೈ ಕೊಡುತ್ತಿರುವ ಕಾರಣದಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ನಿತ್ಯ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.</p>.<p>ಪಟ್ಟಣದ 19 ವಾರ್ಡ್ಗಳಿಗೆ ಕೊಳವೆಬಾವಿಗಳ ನೀರು ಮಾತ್ರ ಆಧಾರವಾಗಿದೆ. ಮೂರು ದಿನಕ್ಕೊಮ್ಮೆ ಸರದಿಯಲ್ಲಿ ನೀರು ಸರಬರಾಜು ಆಗುತ್ತಿತ್ತು. ಆದರೆ, ಈಗ ವಾರ– ಹತ್ತು ದಿನಗಳಾದರೂ ನೀರು ಸರಬರಾಜು ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>‘ಕೆಲವೊಮ್ಮೆ ನೀರು ಎತ್ತುವ ಯಂತ್ರಗಳು ಕೈ ಕೊಟ್ಟಾಗ, ಗಾಳಿ ಮಳೆಗೆ ರಾತ್ರಿ ವೇಳೆ ವಿದ್ಯುತ್ ಕಡಿತ ಮೇಲಿಂದ ಮೇಲೆ ಆಗುತ್ತಿದೆ. ಈ ಕಾರಣದಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಪರಿಣಾಮ ನೀರೆತ್ತುವ ಯಂತ್ರಗಳು ಬಂದ್ ಆಗುತ್ತಿವೆ’ ಎಂದು ನೀರು ಪೂರೈಕೆ ಸಿಬ್ಬಂದಿ ತಿಳಿಸಿದ್ದಾರೆ.</p>.<h2>ಆರಂಭಗೊಳ್ಳದ ಶುದ್ಧ ನೀರಿನ ಘಟಕ:</h2>.<p>ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಒಂದು ವರ್ಷ ಕಳೆದಿದೆ. ಆದರೆ, ಈವರೆಗೂ ನೀರು ಪೂರೈಕೆ ಆಗದ ಹಿನ್ನೆಲೆ ಯಂತ್ರಗಳು ಹಾಳಾಗಿ, ಘಟಕ ಬಂದ್ ಆಗಿದೆ.</p>.<p>ಇದಕ್ಕೆ ಪೂರೈಕೆ ಆಗುತ್ತಿದ್ದ ಕೊಳವೆಬಾವಿ ನೀರು ಕಬ್ಬಿಣಾಂಶ ಹೆಚ್ಚು ಇದೆ ಎನ್ನುವ ಕಾರಣಕ್ಕೆ ಘಟಕವನ್ನು ಸ್ಥಗಿತ ಮಾಡಲಾಗಿದೆ. ಆದರೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<div><blockquote>ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಹೆಚ್ಚುವರಿ ಯಂತ್ರಗಳನ್ನು ಸಂಗ್ರಹ ಸಹ ಮಾಡಿಕೊಂಡಿದ್ದೇವೆ. ಆದರೆ ನೀರಿನ ಸಂಪು ಇರುವ ಕಡೆ ವಿದ್ಯುತ್ ಸಂಪರ್ಕ ಕಡಿತವಾದಾಗ ಈ ರೀತಿ ಸಮಸ್ಯೆ ಆಗಿದೆ </blockquote><span class="attribution">ಮಂಜುನಾಥ ಗುಳೇದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಗುಂದ:</strong> ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಬರ ಎದುರಾಗಿದೆ. ಎರಡ್ಮೂರು ತಿಂಗಳಿಂದ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಮನೆಯಲ್ಲಿ ಎರಡ್ಮೂರು ದಿನಗಳಿಗೆ ಬಳಕೆ ಆಗುವಷ್ಟು ನೀರು ಸಂಗ್ರಹ ಇರುತ್ತದೆ. ಆದರೆ, 8-10 ದಿನಗಳಾದರೂ ನೀರು ಬರದಿದ್ದಾಗ ದೇವರೇ ನಮ್ಮನ್ನು ಕಾಪಾಡಬೇಕಿದೆ...</p>.<p>– ಹೀಗೆ ಆಕ್ರೋಶಭರಿತ ಅಸಹಾಯಕ ಧ್ವನಿಯಲ್ಲಿ ಹೇಳಿದರು ಸ್ಥಳೀಯರಾದ ಮಹಾಂತೇಶ.</p>.<p>‘ಹತ್ತಿರದಲ್ಲಿ ಬಾವಿ, ಕೆರೆ ಇಲ್ಲ. ನಿಯಮಿತವಾಗಿ ನೀರು ಪೂರೈಸದಿದ್ದರೆ ನಾವು ಎಲ್ಲಿಗೆ ಹೋಗೋದು. ಸ್ಥಳಿಯ ಪಟ್ಟಣ ಪಂಚಾಯಿತಿ ನೀರು ಪೂರೈಕೆಯಲ್ಲಿ ಪದೆಪದೇ ನಿರ್ಲಕ್ಷ್ಯ ವಹಿಸುತ್ತಿದೆ. ತುಂಗಭದ್ರ ನೀರು ಸಹ ಇಲ್ಲದಾಗಿದೆ’ ಎಂದು ಕಿಡಿಕಾರಿದರು.</p>.<p>ಕೆಲವು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕೈ ಕೊಡುತ್ತಿರುವ ಕಾರಣದಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ನಿತ್ಯ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.</p>.<p>ಪಟ್ಟಣದ 19 ವಾರ್ಡ್ಗಳಿಗೆ ಕೊಳವೆಬಾವಿಗಳ ನೀರು ಮಾತ್ರ ಆಧಾರವಾಗಿದೆ. ಮೂರು ದಿನಕ್ಕೊಮ್ಮೆ ಸರದಿಯಲ್ಲಿ ನೀರು ಸರಬರಾಜು ಆಗುತ್ತಿತ್ತು. ಆದರೆ, ಈಗ ವಾರ– ಹತ್ತು ದಿನಗಳಾದರೂ ನೀರು ಸರಬರಾಜು ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>‘ಕೆಲವೊಮ್ಮೆ ನೀರು ಎತ್ತುವ ಯಂತ್ರಗಳು ಕೈ ಕೊಟ್ಟಾಗ, ಗಾಳಿ ಮಳೆಗೆ ರಾತ್ರಿ ವೇಳೆ ವಿದ್ಯುತ್ ಕಡಿತ ಮೇಲಿಂದ ಮೇಲೆ ಆಗುತ್ತಿದೆ. ಈ ಕಾರಣದಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಪರಿಣಾಮ ನೀರೆತ್ತುವ ಯಂತ್ರಗಳು ಬಂದ್ ಆಗುತ್ತಿವೆ’ ಎಂದು ನೀರು ಪೂರೈಕೆ ಸಿಬ್ಬಂದಿ ತಿಳಿಸಿದ್ದಾರೆ.</p>.<h2>ಆರಂಭಗೊಳ್ಳದ ಶುದ್ಧ ನೀರಿನ ಘಟಕ:</h2>.<p>ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಒಂದು ವರ್ಷ ಕಳೆದಿದೆ. ಆದರೆ, ಈವರೆಗೂ ನೀರು ಪೂರೈಕೆ ಆಗದ ಹಿನ್ನೆಲೆ ಯಂತ್ರಗಳು ಹಾಳಾಗಿ, ಘಟಕ ಬಂದ್ ಆಗಿದೆ.</p>.<p>ಇದಕ್ಕೆ ಪೂರೈಕೆ ಆಗುತ್ತಿದ್ದ ಕೊಳವೆಬಾವಿ ನೀರು ಕಬ್ಬಿಣಾಂಶ ಹೆಚ್ಚು ಇದೆ ಎನ್ನುವ ಕಾರಣಕ್ಕೆ ಘಟಕವನ್ನು ಸ್ಥಗಿತ ಮಾಡಲಾಗಿದೆ. ಆದರೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<div><blockquote>ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಹೆಚ್ಚುವರಿ ಯಂತ್ರಗಳನ್ನು ಸಂಗ್ರಹ ಸಹ ಮಾಡಿಕೊಂಡಿದ್ದೇವೆ. ಆದರೆ ನೀರಿನ ಸಂಪು ಇರುವ ಕಡೆ ವಿದ್ಯುತ್ ಸಂಪರ್ಕ ಕಡಿತವಾದಾಗ ಈ ರೀತಿ ಸಮಸ್ಯೆ ಆಗಿದೆ </blockquote><span class="attribution">ಮಂಜುನಾಥ ಗುಳೇದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>