ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ
ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತಿರುಪತಿಯ ಎಸ್.ವಿ.ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಮುರಳಿಕೃಷ್ಣ ಅವರು ‘ಆಯುರ್ವೇದ ಆಧಾರಿತ ನರದೌರ್ಬಲ್ಯ ರೋಗಗಳ ತಿಳಿವಳಿಕೆ’ ವಿಷಯ ಕುರಿತು ಮಾತನಾಡಿದರು. ಜತೆಗೆ ವೃದ್ಧಾಪ್ಯದಲ್ಲಿನ ವ್ಯಾಧಿಗಳಲ್ಲಿ ರಾಸಾಯನ ಚಿಕಿತ್ಸೆಯ ಮಹತ್ವ ವಿವರಿಸಿದರು. ಉಡುಪಿಯ ಎಸ್ಡಿಎಂ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ. ಪದ್ಮಕಿರಣ ಸಿ. ‘ನರದೌರ್ಬಲ್ಯ ರೋಗಗಳಲ್ಲಿ ಪಂಚಕರ್ಮ ಚಿಕಿತ್ಸೆ’ ಕುರಿತು ವಿಷಯ ಮಂಡಿಸಿದರು. ಖ್ಯಾತ ಆಯುರ್ವೇದ ಚಿಕಿತ್ಸಕ ಜಮಖಂಡಿಯ ವಿನಾಯಕ ಆಯುರ್ವೇದ ಆಸ್ಪತ್ರೆಯ ಡಾ. ವೀರಣ್ಣ ಜತ್ತಿ ನರದೌರ್ಬಲ್ಯ ರೋಗಗಳ ಬಗ್ಗೆ ತಮ್ಮ ಚಿಕಿತ್ಸಾ ಅನುಭವಗಳನ್ನು ಹಂಚಿಕೊಂಡರು.