ಕರ್ನಾಟಕದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳು ಕನ್ನಡಿಗರ ಮಾನ ಹರಾಜು ಹಾಕುತ್ತಿವೆ. ಭ್ರಷ್ಟಾಚಾರ ಕಬಂಧ ಬಾಹುಗಳಿಂದಾಗಿ ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗಿ ಕುಟುಂಬಗಳು ಕಣ್ಣೀರಿನಿಂದ ಕೈತೊಳೆಯುತ್ತಿವೆ. ತೋರಿಕೆಗೆ ಕ್ರಮ ಕೈಗೊಳ್ಳುತ್ತಿರುವಂತೆ ನಟಿಸದೆ ಇದನ್ನು ಬೇರು ಸಹಿತ ಕಿತ್ತುಹಾಕಲು ಸರ್ಕಾರ ದೃಢ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲೂ ಗಾಂಜಾ ಬೆಳೆಯುವ ಕ್ರಿಯೆ ನಿರಂತರವಾಗಿದ್ದು, ಇದಕ್ಕೆ ಹೊರ ರಾಜ್ಯದವರ ನಂಟು ಇದೆ. ಇದು ಅಧಿಕಾರಿಗಳಿಗೆ ಗೊತ್ತಿರದ ವಿಷಯವಲ್ಲ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.