ಅಂಗವಿಕಲರು ವೃದ್ಧರನ್ನು ಗಾಲಿ ಕುರ್ಚಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸ್ಕೌಟ್ ಮತ್ತು ಗೈಡ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹಾಸನಾಂಬ ದರ್ಶನ ಪಡೆದರು.
ಮಾರುಕಟ್ಟೆ ಬಳಿ ಇರುವ ₹300 ದರದ ಟಿಕೆಟ್ ಸರದಿ.
ಚಿತ್ರ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಮಗುವಿನೊಂದಿಗೆ ಹಾಸನಾಂಬೆ ದರ್ಶನ ಪಡೆದರು.
ಪ್ರಜಾವಾಣಿ ಚಿತ್ರ/ಅತೀಖುರ್ ರಹಮಾನ್

ಟಿಕೆಟ್ ಪ್ರಸಾದ ವಿನಿಯೋಗದಿಂದ ₹ 4.21 ಕೋಟಿ ಆದಾಯ ಬಂದಿದೆ. ಆದಾಯ ದೊಡ್ಡ ವಿಚಾರವಲ್ಲ. ಆದಾಯ ಬರಲಿ ಬಿಡಲಿ. ಬಂದ ಜನಕ್ಕೆ ಉತ್ತಮ ಸೌಕರ್ಯ ಒದಗಿಸುವುದಷ್ಟೆ ನಮ್ಮ ಗುರಿ
ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವಸರದಿಯಲ್ಲಿ ತೆರಳುತ್ತಿದ್ದ ಭಕ್ತರನ್ನು ಭೇಟಿ ಮಾಡಿದ ಸಚಿವ ಕೃಷ್ಣ ಬೈರೇಗೌಡ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.

ಈ ಬಾರಿಯ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದ್ದು. ರಾಜ್ಯದಲ್ಲಿ ಹಿಂದುಳಿದ ದಲಿತ ಹಾಗೂ ಎಲ್ಲಾ ಸಮಾಜದವರು ಸುಭಿಕ್ಷವಾಗಿ ನೆಮ್ಮದಿಯಿಂದ ಬಾಳಲಿ ಎಂದು ಪ್ರಾರ್ಥಿಸಿದ್ದೇನೆ
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರೇವಣ್ಣ ವಿಷಯ ಬೆಳೆಸಲ್ಲ
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಎಸ್ಕಾರ್ಟ್ ವಾಹನದಿಂದ ನಮಗೆ ಸಂವಹನ ಇತ್ತು. ನಾವು ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೇವು. ಆದರೆ ಅವರು ಬರಲಿಲ್ಲ. ಅದು ಅವರವರ ಧರ್ಮ. ಎಲ್ಲರೂ ಹೋಗುವಾಗ ನಾವು ಅಲ್ಲಿಯೇ ಹೋಗಬೇಕು ಎನ್ನುವುದು ಧರ್ಮ. ನಾನು ಅದರ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ ಬೆಳೆಸಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು. ಅವರಿಗೆ ಹಾಸನಾಂಬ ಮೇಲೆ ವಿಶೇಷ ಭಾವನೆ ಪ್ರತೀತಿ ಇಟ್ಟುಕೊಂಡು ಬಂದಿದ್ದಾರೆ. ಬಂದು ಪೂಜೆ ಮಾಡಿಕೊಂಡು ಹೋಗಿದ್ದಾರೆ ಹೋಗಲಿ ಬಿಡಿ. ಇದು ದೊಡ್ಡ ವಿಷಯ ಅಲ್ಲ. ಅದನ್ನು ದೊಡ್ಡದು ಮಾಡಲು ಹೋಗಲ್ಲ ಎಂದರು.