<p><strong>ಹಿರೀಸಾವೆ</strong>: ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ನಡೆಯುತ್ತಿದೆ. ಆದರೆ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಬಹುತೇಕ ಕೊಠಡಿಗಳ ಚಾವಣಿಯ ಸಿಮೆಂಟ್ ಕಾಂಕ್ರೀಟ್ ಅಲ್ಲಲ್ಲಿ ಕಳಚಿ ಬೀಳುತ್ತಿದೆ.</p>.<p>ಈ ಕಟ್ಟಡವನ್ನು ಸುಮಾರು 40 ವರ್ಷಗಳ ಹಿಂದೆ ಕಟ್ಟಲಾಗಿದೆ. ಆರ್ಸಿಸಿಯೂ ಸತ್ವ ಕಳೆದುಕೊಂಡು, ಕಟ್ಟಡ ಶಿಥಿಲಗೊಂಡಿದೆ. ಕಳೆದ ವಾರ ಶಾಲಾ ಅವಧಿಯಲ್ಲಿ 10ನೇ ತರಗತಿಯ ಕೊಠಡಿ ಒಳಗಿನ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿದೆ.</p>.<p>ವಿದ್ಯಾರ್ಥಿಗಳು, ಶಿಕ್ಷಕರು ಆ ಸಮಯದಲ್ಲಿ ಕೋಣೆಯ ಹೊರಭಾಗದಲ್ಲಿದ್ದು, ಅಪಾಯ ತಪ್ಪಿದೆ. ಮಳೆಯ ನೀರಿನಿಂದ ಗೋಡೆಗಳು ತೇವಗೊಂಡು, ಬಿರುಕು ಬಿಟ್ಟಿವೆ. ಶಿಕ್ಷಕರು ಜೀವ ಭಯದಲ್ಲಿ ಬೋಧನೆ ಮಾಡಿದರೆ, ವಿದ್ಯಾರ್ಥಿನಿಯರು ಆದೇ ಭಯದಲ್ಲಿ ಪಾಠ ಕೇಳುತ್ತಿದ್ದಾರೆ.</p>.<p>ಹೋಬಳಿಯಲ್ಲಿರುವ ಏಕೈಕ ಹೆಣ್ಣು ಮಕ್ಕಳ ಪ್ರೌಢಶಾಲೆ ಇದಾಗಿದ್ದು, ಪ್ರಸಕ್ತ ವರ್ಷ ಎಂಟು, ಒಂಬತ್ತು ಮತ್ತು 10ನೇ ತರಗತಿಯಿಂದ (ಕನ್ನಡ ಹಾಗೂ ಇಂಗ್ಲಿಷ್ ವಿಭಾಗದಿಂದ) 137 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.</p>.<p>ಮಳೆ ಬಂದರೆ ಅಲ್ಲಲ್ಲಿ ನೀರು ಸೋರುತ್ತದೆ. ಎಲ್ಲ ಕೋಣೆಗಳ ಚಾವಣಿಯ ಕಾಂಕ್ರೀಟ್ ಅಲ್ಲಲ್ಲಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ. ನೀರು ಸೋರಿಕೆಯಿಂದ ಕೆಲವು ಕಡೆ ಗೋಡೆ, ಚಾವಣಿ ಪಾಚಿಗಟ್ಟಿ, ಕಪ್ಪು ಬಣ್ಣಕ್ಕೆ ತಿರುಗಿವೆ.</p>.<p>ಶಾಲೆ ಕಟ್ಟಡದಲ್ಲಿ ಒಟ್ಟು 11 ಕೊಠಡಿಗಳಿದ್ದು, ಬಹುತೇಕ ಕೊಣೆಗಳು ಸೋರುತ್ತಿವೆ. ಮೂರು ಕೊಠಡಿಯಲ್ಲಿನ ಮೇಲ್ಚಾವಣಿ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿರುವುದರಿಂದ, ಆ ಕೊಠಡಿಯಲ್ಲಿ ಕಳೆದ ವರ್ಷದಿಂದ ಪಾಠ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ವರ್ಷದ ಇನ್ನೆರಡು ಕೋಣೆಗಳು ಬೋಧನೆ ಮಾಡದ ಸ್ಥಿತಿಗೆ ತಲುಪಿವೆ.</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಶಾಲೆಗೆ ಹೊಸ ಕೋಣೆಗಳ ನಿರ್ಮಾಣ ಮಾಡ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಲಕರು ಒತ್ತಾಯಿಸಿದ್ದಾರೆ.</p>.<div><blockquote>ಬಾಲಕಿಯರ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ. </blockquote><span class="attribution">-ರಂಗಸ್ವಾಮಿ, ಎಸ್ಡಿಎಂಸಿ ಉಪಾಧ್ಯಕ್ಷ</span></div>.<div><blockquote>ಶಾಲಾ ಅವಧಿಯಲ್ಲಿ ಒಳಭಾಗದಲ್ಲಿ ಚಾವಣಿ ಕಾಂಕ್ರೀಟ್ ಉದುರಿ ಬಿತ್ತು. ಯಾರಿಗೂ ತೊಂದರೆ ಅಗಿಲ್ಲ. ಕೊಣೆಗಳ ಕೊರತೆ ಇದೆ.</blockquote><span class="attribution">-ಸಿಂಚನಾ, 10ನೇ ತರಗತಿ ವಿದ್ಯಾರ್ಥಿನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ</strong>: ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ನಡೆಯುತ್ತಿದೆ. ಆದರೆ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಬಹುತೇಕ ಕೊಠಡಿಗಳ ಚಾವಣಿಯ ಸಿಮೆಂಟ್ ಕಾಂಕ್ರೀಟ್ ಅಲ್ಲಲ್ಲಿ ಕಳಚಿ ಬೀಳುತ್ತಿದೆ.</p>.<p>ಈ ಕಟ್ಟಡವನ್ನು ಸುಮಾರು 40 ವರ್ಷಗಳ ಹಿಂದೆ ಕಟ್ಟಲಾಗಿದೆ. ಆರ್ಸಿಸಿಯೂ ಸತ್ವ ಕಳೆದುಕೊಂಡು, ಕಟ್ಟಡ ಶಿಥಿಲಗೊಂಡಿದೆ. ಕಳೆದ ವಾರ ಶಾಲಾ ಅವಧಿಯಲ್ಲಿ 10ನೇ ತರಗತಿಯ ಕೊಠಡಿ ಒಳಗಿನ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿದೆ.</p>.<p>ವಿದ್ಯಾರ್ಥಿಗಳು, ಶಿಕ್ಷಕರು ಆ ಸಮಯದಲ್ಲಿ ಕೋಣೆಯ ಹೊರಭಾಗದಲ್ಲಿದ್ದು, ಅಪಾಯ ತಪ್ಪಿದೆ. ಮಳೆಯ ನೀರಿನಿಂದ ಗೋಡೆಗಳು ತೇವಗೊಂಡು, ಬಿರುಕು ಬಿಟ್ಟಿವೆ. ಶಿಕ್ಷಕರು ಜೀವ ಭಯದಲ್ಲಿ ಬೋಧನೆ ಮಾಡಿದರೆ, ವಿದ್ಯಾರ್ಥಿನಿಯರು ಆದೇ ಭಯದಲ್ಲಿ ಪಾಠ ಕೇಳುತ್ತಿದ್ದಾರೆ.</p>.<p>ಹೋಬಳಿಯಲ್ಲಿರುವ ಏಕೈಕ ಹೆಣ್ಣು ಮಕ್ಕಳ ಪ್ರೌಢಶಾಲೆ ಇದಾಗಿದ್ದು, ಪ್ರಸಕ್ತ ವರ್ಷ ಎಂಟು, ಒಂಬತ್ತು ಮತ್ತು 10ನೇ ತರಗತಿಯಿಂದ (ಕನ್ನಡ ಹಾಗೂ ಇಂಗ್ಲಿಷ್ ವಿಭಾಗದಿಂದ) 137 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.</p>.<p>ಮಳೆ ಬಂದರೆ ಅಲ್ಲಲ್ಲಿ ನೀರು ಸೋರುತ್ತದೆ. ಎಲ್ಲ ಕೋಣೆಗಳ ಚಾವಣಿಯ ಕಾಂಕ್ರೀಟ್ ಅಲ್ಲಲ್ಲಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ. ನೀರು ಸೋರಿಕೆಯಿಂದ ಕೆಲವು ಕಡೆ ಗೋಡೆ, ಚಾವಣಿ ಪಾಚಿಗಟ್ಟಿ, ಕಪ್ಪು ಬಣ್ಣಕ್ಕೆ ತಿರುಗಿವೆ.</p>.<p>ಶಾಲೆ ಕಟ್ಟಡದಲ್ಲಿ ಒಟ್ಟು 11 ಕೊಠಡಿಗಳಿದ್ದು, ಬಹುತೇಕ ಕೊಣೆಗಳು ಸೋರುತ್ತಿವೆ. ಮೂರು ಕೊಠಡಿಯಲ್ಲಿನ ಮೇಲ್ಚಾವಣಿ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿರುವುದರಿಂದ, ಆ ಕೊಠಡಿಯಲ್ಲಿ ಕಳೆದ ವರ್ಷದಿಂದ ಪಾಠ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ವರ್ಷದ ಇನ್ನೆರಡು ಕೋಣೆಗಳು ಬೋಧನೆ ಮಾಡದ ಸ್ಥಿತಿಗೆ ತಲುಪಿವೆ.</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಶಾಲೆಗೆ ಹೊಸ ಕೋಣೆಗಳ ನಿರ್ಮಾಣ ಮಾಡ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಲಕರು ಒತ್ತಾಯಿಸಿದ್ದಾರೆ.</p>.<div><blockquote>ಬಾಲಕಿಯರ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ. </blockquote><span class="attribution">-ರಂಗಸ್ವಾಮಿ, ಎಸ್ಡಿಎಂಸಿ ಉಪಾಧ್ಯಕ್ಷ</span></div>.<div><blockquote>ಶಾಲಾ ಅವಧಿಯಲ್ಲಿ ಒಳಭಾಗದಲ್ಲಿ ಚಾವಣಿ ಕಾಂಕ್ರೀಟ್ ಉದುರಿ ಬಿತ್ತು. ಯಾರಿಗೂ ತೊಂದರೆ ಅಗಿಲ್ಲ. ಕೊಣೆಗಳ ಕೊರತೆ ಇದೆ.</blockquote><span class="attribution">-ಸಿಂಚನಾ, 10ನೇ ತರಗತಿ ವಿದ್ಯಾರ್ಥಿನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>