ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ಹೆತ್ತೂರಿನಲ್ಲಿ 13 ಮಿ.ಮೀಟರ್ ಮಳೆಯಾಗಿದೆ. ಅಲ್ಪ ಪ್ರಮಾಣದ ಗಾಳಿ ಮುಂದುವರಿದಿದ್ದು, ಯಸಳೂರು, ಹೆತ್ತೂರು ಹೋಬಳಿಯದ್ಯಾಂತ ಚಳಿಯ ವಾತವಾರಣವಿದೆ. ಬಿಸಿಲೆ ಘಾಟಿ ಪ್ರದೇಶದಲ್ಲಿ ಮಂಜು ಕವಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ವಾರದಿಂದ ಸುರಿದ ಮಳೆಯಿಂದ ಶೀತದ ಪ್ರಮಾಣ ಹೆಚ್ಚಳವಾಗಿದ್ದು, ಕಾಫಿ, ಕಾಳು ಮೆಣಸು ಉದುರಲು ಪ್ರಾರಂಭಿಸಿದೆ. ಚಿಕ್ಕಂದೂರು, ಹಳ್ಳಿಗದ್ದೆ, ಉಚ್ಚಂಗಿ, ಜಾತಹಳ್ಳಿ, ವಣಗೂರು ಭಾಗಗಳಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಹರಡುವ ಭೀತಿ ಉಂಟಾಗಿದೆ.