ಚನ್ನರಾಯಪಟ್ಟಣ: ನವ ದಂಪತಿಯಿಂದ ಪೊಲೀಸರಿಗೆ ಊಟ

ಚನ್ನರಾಯಪಟ್ಟಣ: ಹಸೆಮಣೆ ಏರಿದ ನೂತನ ದಂಪತಿ ಭಾನುವಾರ ಪೊಲೀಸರಿಗೆ ಮದುವೆಯ ಊಟ ನೀಡಿದರು.
ತಾಲ್ಲೂಕಿನ ಗದ್ದೆಬಿಂಡೇನಹಳ್ಳಿ ಗ್ರಾಮದ ರಮ್ಯಾ, ಹಾಸನ ತಾಲ್ಲೂಕು ಅಂಕಪುರ ಗ್ರಾಮದ ಸಂದೇಶ ಅವರ ವಿವಾಹ ಸಮಾರಂಭ ವಧುವಿನ ಊರಿನಲ್ಲಿ ನಡೆಯಿತು. ಲಾಕ್ಡೌನ್ ಇರುವುದರಿಂದ ವಿವಾಹ ಸಮಾರಂಭ ಸರಳವಾಗಿ ನೆರವೇರಿತು. ಬಳಿಕ ದಂಪತಿ ಪೊಲೀಸ್ ಠಾಣೆಗೆ ತೆರಳಿ ವಿವಾಹದ ನಿಮಿತ್ತ ತಯಾರಿಸಿದ ಅಡುಗೆಯನ್ನು ಪೊಲೀಸರಿಗೆ ಉಣ ಬಡಿಸಿದರು.
ಕೊರಾನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.