ಹಾವೇರಿ: ಬ್ಯಾಂಕ್ ಹೆಸರಿನಲ್ಲಿ 99 ಸಾವಿರ ವಂಚನೆ

ಹಾವೇರಿ: ನೀವು ಕೂಡಲೇ ಕೆವೈಸಿ ಅಪ್ಡೇಟ್ ಮಾಡಿದಿದ್ದರೆ, ನಿಮ್ಮ ಎಸ್ಬಿಐ ನೆಟ್ ಬ್ಯಾಂಕಿಂಗ್ ರದ್ದಾಗುತ್ತದೆ ಎಂದು ಮೆಸೇಜ್ ಕಳುಹಿಸಿ, ಬ್ಯಾಂಕ್ ಹೆಸರಿನಲ್ಲಿ ₹99 ಸಾವಿರ ವಂಚಿಸಲಾಗಿದೆ.
ಹಾವೇರಿಯ ಹೆಸ್ಕಾಂ ಕಚೇರಿಯ ಜೂನಿಯರ್ ಎಂಜಿನಿಯರ್ ಲಾಲ್ಸಾಬ್ ಮೆಹಬೂಬ್ಸಾಬ್ ನದಾಫ (43) ಹಣ ಕಳೆದುಕೊಂಡವರು.
ನದಾಫ ಅವರ ಮೊಬೈಲಿಗೆ ಅನಾಮಧೇಯ ಮೊಬೈಲ್ನಿಂದ ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಪಾನ್ ಕಾರ್ಡ್ ಅಪ್ಡೇಟ್ ಮಾಡಲು ಲಿಂಕ್ ಕ್ಲಿಕ್ ಮಾಡಿದಾಗ ಎಸ್ಬಿಐ ಬ್ಯಾಂಕ್ ಆ್ಯಪ್ ತರಹದ ಆ್ಯಪ್ ಓಪನೆ ಆಗಿದೆ.
ಅದರಲ್ಲಿ ಯೂಸರ್ ಐಡಿ ಮತ್ತು ಪಾಸ್ ವರ್ಡ್ ನಮೂದಿಸಿದಾಗ, ನಂತರ ಬಂದ ಓಟಿಪಿ ಅನ್ನು ನಮೂದಿಸಿ ಸಬ್ಮಿಟ್ ಮಾಡಿದಾಗ ನದಾಫ ಅವರ ಅಕೌಂಟಿನಿಂದ ₹99 ಸಾವಿರ ‘ಬಿಲ್ ಡೆಸ್ಕ್’ ಮುಖಾಂತರ ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾವಣೆಯಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾವೇರಿಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.