ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅಹಿತಕರ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ರೈತರಿಂದ ಸಹಿ ಪಡೆಯುವ ಹೊಸ ನಿಯಮ ಜಾರಿಗೆ ತಂದಿದ್ದೇವೆ
– ಸುರೇಶಗೌಡ್ರ ಪಾಟೀಲ ಅಧ್ಯಕ್ಷ ಬ್ಯಾಡಗಿ ವರ್ತಕರ ಸಂಘ
ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಉಪ ಮಾರುಕಟ್ಟೆಗೆ ₹10 ಕೋಟಿ ವೆಚ್ಚದ ‘ಸರ್ಕಾರಿ ಶೈತ್ಯಾಗಾರ’ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ
– ಎಚ್.ವೈ.ಸತೀಶ್ ಕಾರ್ಯದರ್ಶಿ ಬ್ಯಾಡಗಿ ಎಪಿಎಂಸಿ
ಶೈತ್ಯಾಗಾರಗಳು ಭರ್ತಿ
ಬ್ಯಾಡಗಿ ಪಟ್ಟಣ ಮತ್ತು ಸುತ್ತಮುತ್ತ ಇರುವ 32 ಖಾಸಗಿ ಶೈತ್ಯಾಗಾರಗಳು (ಕೋಲ್ಡ್ ಸ್ಟೋರೇಜ್) ಮೆಣಸಿನಕಾಯಿ ದಾಸ್ತಾನಿನಿಂದ ಬಹುತೇಕ ಭರ್ತಿಯಾಗಿವೆ. ಹೊಸದಾಗಿ ಬಂದ ಆವಕವನ್ನು ಇಡಲು ಜಾಗ ಇಲ್ಲದಂತಾಗಿದೆ. ಇದು ವರ್ತಕರು ಮತ್ತು ರೈತರ ಆತಂಕಕ್ಕೆ ಕಾರಣವಾಗಿದೆ. ‘ಹಿಂದಿನ ವರ್ಷದ 9 ಲಕ್ಷ ಮೆಣಸಿನಕಾಯಿ ಚೀಲಗಳು ಇನ್ನೂ ಶೈತ್ಯಾಗಾರಗಳಲ್ಲೇ ಇವೆ. ಉತ್ತಮ ದರ ಸಿಗದ ಕಾರಣದಿಂದ ಹೆಚ್ಚಿನ ರೈತರು ಮೆಣಸಿನಕಾಯಿ ಚೀಲಗಳನ್ನು ಶೈತ್ಯಾಗಾರಗಳಲ್ಲಿ ಇಟ್ಟಿದ್ದಾರೆ. ಸರ್ಕಾರಕ್ಕೆ ಪ್ರತಿ ವರ್ಷ ಬ್ಯಾಡಗಿ ಎಪಿಎಂಸಿಯಿಂದ ₹15 ಕೋಟಿ ಸೆಸ್ ಕಟ್ಟುತ್ತೇವೆ. ಈ ಹಣದಲ್ಲಿ ಸರ್ಕಾರ ಶೈತ್ಯಾಗಾರ ಕಟ್ಟುವ ಬದಲು ಬೇರೆ ಉದ್ದೇಶಕ್ಕೆ ಹಣ ಬಳಕೆ ಮಾಡುತ್ತಿದೆ’ ಎಂದು ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್.ಮೋರಿಗೇರಿ ದೂರಿದರು.