ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮಾತಿನಲ್ಲೇ ಯುದ್ಧ ಶುರು ಮಾಡಿರುವ ನಾಯಕರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲ ಕಸರತ್ತುಗಳನ್ನು ಮಾಡುದ್ದಾರೆ. ಈ ಕ್ಷೇತ್ರದಲ್ಲಿ 3 ದಶಕಗಳ ಕಾಲ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಸಿ.ಎಂ ಉದಾಸಿ ಮತ್ತು ಮನೋಹರ ತಹಶೀಲ್ದಾರ್ ಕಣದಲ್ಲಿ ಇಲ್ಲದೇ ನಡೆಯುತ್ತಿರುವ ಮೊದಲ ಚುನಾವಣೆ ಇದು. ಗೆಲುವು ಯಾರಿಗೆ ಎಂಬುದು ಸದ್ಯದ ಕುತೂಹಲ.