<p><strong>ಹಿರೇಕೆರೂರ</strong>: ‘ಮನು ವಿಕಾಸ ಸಂಸ್ಥೆಯು ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಪ್ರಗತಿಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.</p>.<p>ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕರ್ಜಗಿಯ ಮನುವಿಕಾಸ ಸಂಸ್ಥೆ ಮತ್ತು ಎಚ್.ಡಿ.ಬಿ.ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಚಾಲನೆ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಭೂಮಿ ಬರಡಾಗಿದೆ. ಕುಡಿಯಲು ನೀರಿಲ್ಲದೆ ಕೆರೆ ಕಟ್ಟೆಗಳು ಖಾಲಿಯಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಕೆರೆಗಳನ್ನು ಅಭಿವೃದ್ಧಿ ಪಡೆಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿರುವುದು ರೈತರಿಗೆ ಉಪಯೋಗವಾಗುತ್ತದೆ‘ ಎಂದು ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಹೇಳಿದರು. </p>.<p>ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.</p>.<p>ಸಂಸ್ಥೆಯ ಯೋಜನಾ ಉಪ ನಿರ್ದೇಶಕ ಎಂ.ಜಿ.ಹೆಗಡೆ, ಎಸ್.ಎಸ್.ಪಾಟೀಲ್ ಮಾತನಾಡಿದರು. ಅಶ್ವತ್ ನಾಯ್ಕ್ ಮತ್ತು ಕುಸುಮಾ ಕೋಟ್ಟಿಗದ್ದೆ ನಿರೂಪಿಸಿದರು.</p>.<p>ಸಿದ್ದೇಶ ಎಂ.ಡಿ, ರಾಮಣ್ಣ ಕೆಂಚಳ್ಳೇರ, ಸುಮಾ ಪಾಟೀಲ್, ಮಹೇಶ ಗುಬ್ಬಿ, ಚಂದ್ರಪ್ಪ ಮರಡಿ, ದೇವರಾಜ ನಾಯಕ, ಬಸವರಾಜ ಎಸ್.ಜಿ.ಶಿವಯೋಗಿ ಮುಕ್ರಿ, ವಿನಯ್ ಪಾಟೀಲ್ ಮತ್ತು ಇತರರು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ</strong>: ‘ಮನು ವಿಕಾಸ ಸಂಸ್ಥೆಯು ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಪ್ರಗತಿಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.</p>.<p>ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕರ್ಜಗಿಯ ಮನುವಿಕಾಸ ಸಂಸ್ಥೆ ಮತ್ತು ಎಚ್.ಡಿ.ಬಿ.ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಚಾಲನೆ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಭೂಮಿ ಬರಡಾಗಿದೆ. ಕುಡಿಯಲು ನೀರಿಲ್ಲದೆ ಕೆರೆ ಕಟ್ಟೆಗಳು ಖಾಲಿಯಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಕೆರೆಗಳನ್ನು ಅಭಿವೃದ್ಧಿ ಪಡೆಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿರುವುದು ರೈತರಿಗೆ ಉಪಯೋಗವಾಗುತ್ತದೆ‘ ಎಂದು ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಹೇಳಿದರು. </p>.<p>ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.</p>.<p>ಸಂಸ್ಥೆಯ ಯೋಜನಾ ಉಪ ನಿರ್ದೇಶಕ ಎಂ.ಜಿ.ಹೆಗಡೆ, ಎಸ್.ಎಸ್.ಪಾಟೀಲ್ ಮಾತನಾಡಿದರು. ಅಶ್ವತ್ ನಾಯ್ಕ್ ಮತ್ತು ಕುಸುಮಾ ಕೋಟ್ಟಿಗದ್ದೆ ನಿರೂಪಿಸಿದರು.</p>.<p>ಸಿದ್ದೇಶ ಎಂ.ಡಿ, ರಾಮಣ್ಣ ಕೆಂಚಳ್ಳೇರ, ಸುಮಾ ಪಾಟೀಲ್, ಮಹೇಶ ಗುಬ್ಬಿ, ಚಂದ್ರಪ್ಪ ಮರಡಿ, ದೇವರಾಜ ನಾಯಕ, ಬಸವರಾಜ ಎಸ್.ಜಿ.ಶಿವಯೋಗಿ ಮುಕ್ರಿ, ವಿನಯ್ ಪಾಟೀಲ್ ಮತ್ತು ಇತರರು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>