<p><strong>ಹಾವೇರಿ:</strong> ವಿಘ್ನ ನಿವಾರಕ ಗಣಪತಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.</p>.<p>ಜಿಲ್ಲೆಯ ಹಲವು ಕಲಾವಿದರು ಕುಟುಂಬ ಸಮೇತರಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಹಾಗೂ ಹಲವು ಕಡೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಇರಿಸಲಾಗಿದ್ದು, ಸ್ಥಳಕ್ಕೆ ಬರುತ್ತಿರುವ ಜನರು ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.</p>.<p>ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲ ಕಡೆಯೂ ಗಣಪತಿ ಹಬ್ಬದ ಸಡಗರ ಮನೆ ಮಾಡುತ್ತದೆ. ಈ ವರ್ಷ ಶ್ರಾವಣ ಮಾಸದ ಕೊನೆ ವಾರದಲ್ಲಿಯೇ ಜನರು, ಗಣಪತಿ ಹಬ್ಬಕ್ಕೆ ತಯಾರಿ ಶುರು ಮಾಡಿದ್ದಾರೆ. ಗಣಪತಿ ಮೂರ್ತಿಗಳು ಇರುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಜನರು, ತಮ್ಮಿಷ್ಟದ ಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಪರಿಸರ ರಕ್ಷಣೆ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ತಯಾರಿ ಹಾಗೂ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೇ ಕೆಲವರು, ಪಿಒಪಿ ಮೂರ್ತಿಗಳನ್ನು ತೆರೆಮರೆಯಲ್ಲಿ ಮಾರುತ್ತಿದ್ದಾರೆ. ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.</p>.<p>ಪಿಒಪಿ ಮೂರ್ತಿಗಳ ಭರಾಟೆಯ ನಡುವೆಯೂ ಹಲವು ಕಲಾವಿದರ ಕುಟುಂಬಗಳು, ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ದೇವಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿರುವ ಹಲವು ಕುಟುಂಬಗಳು, ದಶಕಗಳಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಇವರು ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಜಿಲ್ಲೆಯ ಜನರಿಂದ ಉತ್ತಮ ಬೇಡಿಕೆಯಿದೆ.</p>.<p>ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣಪತಿ ಮೂರ್ತಿಗಳನ್ನು ಹೊಂದಿಸಿಡಲಾಗಿದೆ. ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ಇತರೆ ತಾಲ್ಲೂಕಿನ ಜನರು ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಮ್ಮಿಷ್ಟದ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಮುಂಗಡವಾಗಿ ಜನರು ಕಾಯ್ದಿರಿಸುವ ಮೂರ್ತಿಗಳಿಗೆ, ನಂಬರ್ಗಳನ್ನು ಹಾಕಿಡಲಾಗುತ್ತಿದೆ.</p>.<p>ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣಪತಿ ಮೂರ್ತಿಗಳನ್ನೂ ದೇವಸ್ಥಾನದಲ್ಲಿ ಇರಿಸಲಾಗಿದೆ. 2 ಅಡಿಯಿಂದ 6 ಅಡಿಯಷ್ಟು ಎತ್ತರದ ದೊಡ್ಡ ಗಣಪತಿ ಮೂರ್ತಿಗಳು ಸಹ ದೇವಸ್ಥಾನದಲ್ಲಿವೆ. ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಹೋಲುವ ರೀತಿಯಲ್ಲಿ ಗಣಪತಿ ಮೂರ್ತಿ ತಯಾರಿಸಲಾಗಿದ್ದು, ಹನುಮಂತನ ಮೂರ್ತಿ ಸಹ ರಚಿಸಲಾಗಿದೆ. ಈ ಮೂರ್ತಿ ನೋಡುಗರ ಗಮನ ಸೆಳೆಯುತ್ತಿದ್ದು, ಯಾವ ಪ್ರದೇಶದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.</p>.<p><strong>ಕೆರೆ ಮಣ್ಣು ಬಳಕೆ:</strong> ‘ಯುಗಾದಿ ಹಬ್ಬದಿಂದಲೇ ಗಣಪತಿ ಮೂರ್ತಿ ತಯಾರಿಕೆ ಆರಂಭವಾಗುತ್ತದೆ. ಹುಬ್ಬಳ್ಳಿ ಉಣಕಲ್ ಕೆರೆ ಹಾಗೂ ಇತರೆ ಕೆರೆಯ ಮಣ್ಣು ಬಳಸಿಕೊಂಡು ಮೂರ್ತಿ ತಯಾರಿಸಲಾಗಿದ್ದು, ಜನರಿಂದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ದೇವಗಿರಿಯ ಪುಷ್ಪಾ ಚಕ್ರಸಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೆರೆ ಮಣ್ಣಿನ ಜೊತೆಯಲ್ಲಿ ಹತ್ತಿ ಹಾಗೂ ನಾರು ಬೆರೆಸಿ, ಹದ ಮಾಡಿ ಮೂರ್ತಿ ತಯಾರಿಕೆ ಮಾಡುತ್ತೇವೆ. ಇಂಥ ಮಣ್ಣಿನಿಂದ ತಯಾರಿಸುವ ಮೂರ್ತಿ, ಬೇಗನೇ ಬಿರುಕು ಬಿಡುವುದಿಲ್ಲ. ಈ ವರ್ಷ ನಾವು 300ಕ್ಕೂ ಹೆಚ್ಚು ಗಣಪತಿ ತಯಾರಿಸಿದ್ದೇವೆ. ಈ ಪೈಕಿ 200 ಗಣಪತಿ ಮೂರ್ತಿಗಳು ಈಗಾಗಲೇ ಬುಕ್ಕಿಂಗ್ ಆಗಿದೆ’ ಎಂದರು.</p>.<p>‘12 ವರ್ಷದಿಂದ ಮಗ ನಿಂಗರಾಜು ಹಾಗೂ ನಾನು, ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದೇವೆ. ನಮ್ಮ ಮೂರ್ತಿ ಖರೀದಿಸಲು ಕಾಯಂ ಗ್ರಾಹಕರಿದ್ದಾರೆ. ಹಾವೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ಊರಿನ ಜನರು ನಮ್ಮ ಬಳಿ ಬಂದು ಮೂರ್ತಿ ಕಾಯ್ದಿರಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>ಮೂರ್ತಿ ಕಾಯ್ದಿರಿಸಿದ ಖಾಸಗಿ ನೌಕರ ಕೃಷ್ಣ, ‘ಪ್ರತಿ ವರ್ಷವೂ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಈ ವರ್ಷವೂ ಮಣ್ಣಿನ ಗಣಪತಿ ಕಾಯ್ದಿರಿಸಲಾಗಿದೆ. ಕೆಲವರು ಪಿಒಪಿ ಮಾರುತ್ತಿದ್ದಾರೆ. ಅಂಥವರನ್ನು ಅಧಿಕಾರಿಗಳು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು. ಪರಿಸರ ರಕ್ಷಣೆ ಮಾಡಬೇಕು’ ಎಂದರು.</p>.<div><div class="bigfact-title">ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರು</div><div class="bigfact-description">ಗಣಪತಿ ಮೂರ್ತಿ ಕೂರಿಸುವ ಮಂಟಪ ಸಿದ್ಧಪಡಿಸಲು ಅಗತ್ಯವಿರುವ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿದೆ. ನಗರದ ಮಾರುಕಟ್ಟೆಗಳ ಮಳಿಗೆಗಳಲ್ಲಿ ವಿದ್ಯುತ್ ದೀಪಗಳ ಸರಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಜೋತು ಬಿಡಲಾಗಿದೆ. ಜನರು ಮಳಿಗೆಗೆ ಹೋಗಿ ತಮ್ಮಿಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ವಿಘ್ನ ನಿವಾರಕ ಗಣಪತಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.</p>.<p>ಜಿಲ್ಲೆಯ ಹಲವು ಕಲಾವಿದರು ಕುಟುಂಬ ಸಮೇತರಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಹಾಗೂ ಹಲವು ಕಡೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಇರಿಸಲಾಗಿದ್ದು, ಸ್ಥಳಕ್ಕೆ ಬರುತ್ತಿರುವ ಜನರು ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.</p>.<p>ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲ ಕಡೆಯೂ ಗಣಪತಿ ಹಬ್ಬದ ಸಡಗರ ಮನೆ ಮಾಡುತ್ತದೆ. ಈ ವರ್ಷ ಶ್ರಾವಣ ಮಾಸದ ಕೊನೆ ವಾರದಲ್ಲಿಯೇ ಜನರು, ಗಣಪತಿ ಹಬ್ಬಕ್ಕೆ ತಯಾರಿ ಶುರು ಮಾಡಿದ್ದಾರೆ. ಗಣಪತಿ ಮೂರ್ತಿಗಳು ಇರುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಜನರು, ತಮ್ಮಿಷ್ಟದ ಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಪರಿಸರ ರಕ್ಷಣೆ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ತಯಾರಿ ಹಾಗೂ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೇ ಕೆಲವರು, ಪಿಒಪಿ ಮೂರ್ತಿಗಳನ್ನು ತೆರೆಮರೆಯಲ್ಲಿ ಮಾರುತ್ತಿದ್ದಾರೆ. ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.</p>.<p>ಪಿಒಪಿ ಮೂರ್ತಿಗಳ ಭರಾಟೆಯ ನಡುವೆಯೂ ಹಲವು ಕಲಾವಿದರ ಕುಟುಂಬಗಳು, ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ದೇವಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿರುವ ಹಲವು ಕುಟುಂಬಗಳು, ದಶಕಗಳಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಇವರು ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಜಿಲ್ಲೆಯ ಜನರಿಂದ ಉತ್ತಮ ಬೇಡಿಕೆಯಿದೆ.</p>.<p>ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣಪತಿ ಮೂರ್ತಿಗಳನ್ನು ಹೊಂದಿಸಿಡಲಾಗಿದೆ. ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ಇತರೆ ತಾಲ್ಲೂಕಿನ ಜನರು ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಮ್ಮಿಷ್ಟದ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಮುಂಗಡವಾಗಿ ಜನರು ಕಾಯ್ದಿರಿಸುವ ಮೂರ್ತಿಗಳಿಗೆ, ನಂಬರ್ಗಳನ್ನು ಹಾಕಿಡಲಾಗುತ್ತಿದೆ.</p>.<p>ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣಪತಿ ಮೂರ್ತಿಗಳನ್ನೂ ದೇವಸ್ಥಾನದಲ್ಲಿ ಇರಿಸಲಾಗಿದೆ. 2 ಅಡಿಯಿಂದ 6 ಅಡಿಯಷ್ಟು ಎತ್ತರದ ದೊಡ್ಡ ಗಣಪತಿ ಮೂರ್ತಿಗಳು ಸಹ ದೇವಸ್ಥಾನದಲ್ಲಿವೆ. ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಹೋಲುವ ರೀತಿಯಲ್ಲಿ ಗಣಪತಿ ಮೂರ್ತಿ ತಯಾರಿಸಲಾಗಿದ್ದು, ಹನುಮಂತನ ಮೂರ್ತಿ ಸಹ ರಚಿಸಲಾಗಿದೆ. ಈ ಮೂರ್ತಿ ನೋಡುಗರ ಗಮನ ಸೆಳೆಯುತ್ತಿದ್ದು, ಯಾವ ಪ್ರದೇಶದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.</p>.<p><strong>ಕೆರೆ ಮಣ್ಣು ಬಳಕೆ:</strong> ‘ಯುಗಾದಿ ಹಬ್ಬದಿಂದಲೇ ಗಣಪತಿ ಮೂರ್ತಿ ತಯಾರಿಕೆ ಆರಂಭವಾಗುತ್ತದೆ. ಹುಬ್ಬಳ್ಳಿ ಉಣಕಲ್ ಕೆರೆ ಹಾಗೂ ಇತರೆ ಕೆರೆಯ ಮಣ್ಣು ಬಳಸಿಕೊಂಡು ಮೂರ್ತಿ ತಯಾರಿಸಲಾಗಿದ್ದು, ಜನರಿಂದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ದೇವಗಿರಿಯ ಪುಷ್ಪಾ ಚಕ್ರಸಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೆರೆ ಮಣ್ಣಿನ ಜೊತೆಯಲ್ಲಿ ಹತ್ತಿ ಹಾಗೂ ನಾರು ಬೆರೆಸಿ, ಹದ ಮಾಡಿ ಮೂರ್ತಿ ತಯಾರಿಕೆ ಮಾಡುತ್ತೇವೆ. ಇಂಥ ಮಣ್ಣಿನಿಂದ ತಯಾರಿಸುವ ಮೂರ್ತಿ, ಬೇಗನೇ ಬಿರುಕು ಬಿಡುವುದಿಲ್ಲ. ಈ ವರ್ಷ ನಾವು 300ಕ್ಕೂ ಹೆಚ್ಚು ಗಣಪತಿ ತಯಾರಿಸಿದ್ದೇವೆ. ಈ ಪೈಕಿ 200 ಗಣಪತಿ ಮೂರ್ತಿಗಳು ಈಗಾಗಲೇ ಬುಕ್ಕಿಂಗ್ ಆಗಿದೆ’ ಎಂದರು.</p>.<p>‘12 ವರ್ಷದಿಂದ ಮಗ ನಿಂಗರಾಜು ಹಾಗೂ ನಾನು, ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದೇವೆ. ನಮ್ಮ ಮೂರ್ತಿ ಖರೀದಿಸಲು ಕಾಯಂ ಗ್ರಾಹಕರಿದ್ದಾರೆ. ಹಾವೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ಊರಿನ ಜನರು ನಮ್ಮ ಬಳಿ ಬಂದು ಮೂರ್ತಿ ಕಾಯ್ದಿರಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>ಮೂರ್ತಿ ಕಾಯ್ದಿರಿಸಿದ ಖಾಸಗಿ ನೌಕರ ಕೃಷ್ಣ, ‘ಪ್ರತಿ ವರ್ಷವೂ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಈ ವರ್ಷವೂ ಮಣ್ಣಿನ ಗಣಪತಿ ಕಾಯ್ದಿರಿಸಲಾಗಿದೆ. ಕೆಲವರು ಪಿಒಪಿ ಮಾರುತ್ತಿದ್ದಾರೆ. ಅಂಥವರನ್ನು ಅಧಿಕಾರಿಗಳು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು. ಪರಿಸರ ರಕ್ಷಣೆ ಮಾಡಬೇಕು’ ಎಂದರು.</p>.<div><div class="bigfact-title">ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರು</div><div class="bigfact-description">ಗಣಪತಿ ಮೂರ್ತಿ ಕೂರಿಸುವ ಮಂಟಪ ಸಿದ್ಧಪಡಿಸಲು ಅಗತ್ಯವಿರುವ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿದೆ. ನಗರದ ಮಾರುಕಟ್ಟೆಗಳ ಮಳಿಗೆಗಳಲ್ಲಿ ವಿದ್ಯುತ್ ದೀಪಗಳ ಸರಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಜೋತು ಬಿಡಲಾಗಿದೆ. ಜನರು ಮಳಿಗೆಗೆ ಹೋಗಿ ತಮ್ಮಿಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>