ವ್ಯಕ್ತಿತ್ವ ವಿಕಾಸನ ಶಿಬಿರ ಅ.10 ರಿಂದ 12ರ ವರೆಗೆ ನಡೆಯಲಿದ್ದು ಸಮಾಜದ 250ರಿಂದ 500 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಈ ಶಿಬಿರ ನಡೆಸಲಾಗಿದ್ದು ಐಎಎಸ್ ಕೆಎಎಸ್ ಐಪಿಎಸ್ ಸೇರಿದಂತೆ ಸುಮಾರು 16 ವಿಷಯಗಳ ಕುರಿತು ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. 18ರಿಂದ 35 ವರ್ಷದ ಒಳಗಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಮಾಜಿ ಸಚಿವ ಮುರಿಗೇಶ ನಿರಾಣಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸುಧಾಮೂರ್ತಿ ಆಗಮಿಸಲಿದ್ದಾರೆ ಎಂದು ಸೋಮನಗೌಡ ಎಂ. ಪಾಟೀಲ ತಿಳಿಸಿದರು.