ಶನಿವಾರಸಂತೆ: ಇಲ್ಲಿನ ಸೋಮವಾರಪೇಟೆ– ಶನಿವಾರಸಂತೆ ರಾಜ್ಯ ಹೆದ್ದಾರಿಯ ಹೆಗ್ಗಳ ಗ್ರಾಮದ ತಿರುವಿನಲ್ಲಿ ಬೆಂಗಳೂರಿನಿಂದ ಸೋಮವಾರಪೇಟೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಸರಿಯಿತು.
ಮಧ್ಯಾಹ್ನ ಸುರಿದ ಬಿರುಸಿನ ಮಳೆಯಿಂದ ರಸ್ತೆಯು ಚಾಲಕನಿಗೆ ಸರಿಯಾಗಿ ಕಾಣದೆ ಮತ್ತು ಎದುರಿನಿಂದ ಬಂದ ಕೊಳವೆಬಾರಿ ಕೊರೆಯುವ ಲಾರಿಗೆ ಸ್ಥಳಾವಕಾಶ ಮಾಡಲು ಆಗದೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಗೆ ತಲುಪಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.