<p><strong>ಗಂಗಾವತಿ (ಕೊಪ್ಪಳ):</strong> ಜಿಲ್ಲೆಯ ಅಂಜನಾದ್ರಿ ದೇವಸ್ಥಾನ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತು ಚರ್ಚಿಸಲು ಖುದ್ದು ಮುಖ್ಯಮಂತ್ರಿಯನ್ನೇ ಭೇಟಿಯಾಗಲು ಭೂ ಮಾಲೀಕರು ನಿರ್ಧರಿಸಿದ್ದಾರೆ.</p>.<p>ಭೂಮಿ ನೀಡುವ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಬೇಕಿದೆ. ಮುಖ್ಯಮಂತ್ರಿಯನ್ನೂ ಭೇಟಿಯಾಗಬೇಕಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಭೂ ಮಾಲೀಕರು ಮಾಡಿದ ಮನವಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಒಪ್ಪಿಗೆ ಸೂಚಿಸಿದರು.</p>.<p>ಈ ಕುರಿತು ಚರ್ಚಿಸಲು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಸಭೆ ನಡೆಯಿತು.</p>.<p>ಹಲವಾರು ವರ್ಷಗಳಿಂದ ಬೇಸಾಯದಿಂದಲೇ ಜೀವನ ನಡೆಸುತ್ತ ಬಂದ ಕುಟುಂಬಗಳಿಗೆ ಈಗ ಏಕಾಏಕಿ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ದಿಢೀರನೇ ನೋಟಿಸ್ ಕೂಡ ನೀಡಿದೆ. ಆದ್ದರಿಂದ ತಕ್ಷಣವೇ ನಿರ್ಧಾರ ಹೇಳಲು ಆಗುವುದಿಲ್ಲ ಎಂದು ಭೂ ಮಾಲೀಕರು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ರಾಜ್ಯ ಸರ್ಕಾರದ ಆದೇಶದಂತೆ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ತಾತ್ಕಾಲಿಕ ನೀಲನಕ್ಷೆ ರಚಿಸಿ, ಭೂಸ್ವಾಧೀನಕ್ಕೆ ಮುಂದಾಗಿದ್ದೇವೆ. ಈ ನಕ್ಷೆಯೇ ಅಂತಿಮವಲ್ಲ. ನಕ್ಷೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತವೆನಿಸಿದ ಭೂಮಿ ಮಾತ್ರ ಸ್ವಾಧೀನ ಮಾಡಿಕೊಳ್ಳಲಾಗುವುದು‘ ಎಂದು ತಿಳಿಸಿದರು.</p>.<p>‘ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕಾಮಗಾರಿಗಳ ನೀಲನಕ್ಷೆ ನೀಡಿದ ನಂತರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ನಿಯಮದ ಪ್ರಕಾರವೇ ಭೂ ಸ್ವಾಧೀನ ಮಾಡಲಾಗುವುದು‘ ಎಂದು ಹೇಳಿದರು.</p>.<p>ವಾಣಿಜ್ಯ ಸಂಕೀರ್ಣ, ವಸತಿ ಗೃಹ, ಪ್ರವಾಸಿ ಮಂದಿರ, ಯಾತ್ರಿ ನಿವಾಸ ಸೇರಿದಂತೆ ಅನೇಕ ಕೆಲಸಗಳು ನಡೆಯಬೇಕಿದೆ. ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ ಮೇಲೆ ಕೆಲಸ ಕೊಡಲಾಗುವುದು. ಜೀವನಾಂಶವನ್ನೂ ಒದಗಿಸಲಾಗುವುದು ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ ‘ತಾತ್ಕಾಲಿಕ ನೀಲನಕ್ಷೆಯ ಪ್ರಕಾರ 55 ಎಕರೆ ಭೂಮಿ ಬೇಕಾಗಿದ್ದು, ರೈತರು ಒಪ್ಪಿದರೆ ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಎಕರೆಗೆ ಅಂದಾಜು ₹42 ಲಕ್ಷ ನೀಡಲು ಅವಕಾಶವಿದೆ‘ ಎಂದರು.</p>.<p>ರಾಜವಂಶಸ್ಥ ಶ್ರೀಕೃಷ್ಣದೇವರಾಯ ಮಾತನಾಡಿ ‘ಆನೆಗೊಂದಿ ಸುತ್ತಮುತ್ತ 20 ದೇವಸ್ಥಾನಗಳಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯ ಹಾಳು ಮಾಡಬಾರದು. ಅಂಜನಾದ್ರಿ ಧಾರ್ಮಿಕ ಪುಣ್ಯಕ್ಷೇತ್ರವೇ ಹೊರತು; ಪ್ರವಾಸಿ ತಾಣವಲ್ಲ. ಮೂಲ ಸೌಂದರ್ಯಕ್ಕೆ ಧಕ್ಕೆಯಾದರೆ ಅದನ್ನು ವಿರೋಧಿಸುತ್ತೇವೆ‘ ಎಂದರು.</p>.<p>ರೈತ ಶ್ರೀನಾಥ, ಪ್ರಶಾಂತ ಸೇರಿದಂತೆ ಕೆಲ ರೈತರು ’ಅಂಜನಾದ್ರಿ ಸಮೀಪದ ಭೂಮಿ ಪಡೆದು ಪರ್ಯಾಯ ಭೂಮಿ ಒದಗಿಸಬೇಕು‘ ಎಂದು ಆಗ್ರಹಿಸಿದರು.</p>.<p>ಎ.ಸಿ ಬಸವಣ್ಣೆಪ್ಪ, ರಾಜವಂಶಸ್ಥೆ ಲಲಿತಾ ರಾಣಿ, ಹರಿಹರ ದೇವರಾಯ, ತಹಶೀಲ್ದಾರ್ ಯು.ನಾಗರಾಜ, ಇಒ ಮಹಾಂತಗೌಡ ಪಾಟೀಲ, ಪಿಡಿಒ ಕೃಷ್ಣಪ್ಪ, ಸುದರ್ಶನ್ ವರ್ಮ ಸೇರಿದಂತೆ ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ ಹಾಗೂ ಸಾಣಾಪುರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ (ಕೊಪ್ಪಳ):</strong> ಜಿಲ್ಲೆಯ ಅಂಜನಾದ್ರಿ ದೇವಸ್ಥಾನ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತು ಚರ್ಚಿಸಲು ಖುದ್ದು ಮುಖ್ಯಮಂತ್ರಿಯನ್ನೇ ಭೇಟಿಯಾಗಲು ಭೂ ಮಾಲೀಕರು ನಿರ್ಧರಿಸಿದ್ದಾರೆ.</p>.<p>ಭೂಮಿ ನೀಡುವ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಬೇಕಿದೆ. ಮುಖ್ಯಮಂತ್ರಿಯನ್ನೂ ಭೇಟಿಯಾಗಬೇಕಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಭೂ ಮಾಲೀಕರು ಮಾಡಿದ ಮನವಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಒಪ್ಪಿಗೆ ಸೂಚಿಸಿದರು.</p>.<p>ಈ ಕುರಿತು ಚರ್ಚಿಸಲು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಸಭೆ ನಡೆಯಿತು.</p>.<p>ಹಲವಾರು ವರ್ಷಗಳಿಂದ ಬೇಸಾಯದಿಂದಲೇ ಜೀವನ ನಡೆಸುತ್ತ ಬಂದ ಕುಟುಂಬಗಳಿಗೆ ಈಗ ಏಕಾಏಕಿ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ದಿಢೀರನೇ ನೋಟಿಸ್ ಕೂಡ ನೀಡಿದೆ. ಆದ್ದರಿಂದ ತಕ್ಷಣವೇ ನಿರ್ಧಾರ ಹೇಳಲು ಆಗುವುದಿಲ್ಲ ಎಂದು ಭೂ ಮಾಲೀಕರು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ರಾಜ್ಯ ಸರ್ಕಾರದ ಆದೇಶದಂತೆ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ತಾತ್ಕಾಲಿಕ ನೀಲನಕ್ಷೆ ರಚಿಸಿ, ಭೂಸ್ವಾಧೀನಕ್ಕೆ ಮುಂದಾಗಿದ್ದೇವೆ. ಈ ನಕ್ಷೆಯೇ ಅಂತಿಮವಲ್ಲ. ನಕ್ಷೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತವೆನಿಸಿದ ಭೂಮಿ ಮಾತ್ರ ಸ್ವಾಧೀನ ಮಾಡಿಕೊಳ್ಳಲಾಗುವುದು‘ ಎಂದು ತಿಳಿಸಿದರು.</p>.<p>‘ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕಾಮಗಾರಿಗಳ ನೀಲನಕ್ಷೆ ನೀಡಿದ ನಂತರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ನಿಯಮದ ಪ್ರಕಾರವೇ ಭೂ ಸ್ವಾಧೀನ ಮಾಡಲಾಗುವುದು‘ ಎಂದು ಹೇಳಿದರು.</p>.<p>ವಾಣಿಜ್ಯ ಸಂಕೀರ್ಣ, ವಸತಿ ಗೃಹ, ಪ್ರವಾಸಿ ಮಂದಿರ, ಯಾತ್ರಿ ನಿವಾಸ ಸೇರಿದಂತೆ ಅನೇಕ ಕೆಲಸಗಳು ನಡೆಯಬೇಕಿದೆ. ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ ಮೇಲೆ ಕೆಲಸ ಕೊಡಲಾಗುವುದು. ಜೀವನಾಂಶವನ್ನೂ ಒದಗಿಸಲಾಗುವುದು ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ ‘ತಾತ್ಕಾಲಿಕ ನೀಲನಕ್ಷೆಯ ಪ್ರಕಾರ 55 ಎಕರೆ ಭೂಮಿ ಬೇಕಾಗಿದ್ದು, ರೈತರು ಒಪ್ಪಿದರೆ ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಎಕರೆಗೆ ಅಂದಾಜು ₹42 ಲಕ್ಷ ನೀಡಲು ಅವಕಾಶವಿದೆ‘ ಎಂದರು.</p>.<p>ರಾಜವಂಶಸ್ಥ ಶ್ರೀಕೃಷ್ಣದೇವರಾಯ ಮಾತನಾಡಿ ‘ಆನೆಗೊಂದಿ ಸುತ್ತಮುತ್ತ 20 ದೇವಸ್ಥಾನಗಳಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯ ಹಾಳು ಮಾಡಬಾರದು. ಅಂಜನಾದ್ರಿ ಧಾರ್ಮಿಕ ಪುಣ್ಯಕ್ಷೇತ್ರವೇ ಹೊರತು; ಪ್ರವಾಸಿ ತಾಣವಲ್ಲ. ಮೂಲ ಸೌಂದರ್ಯಕ್ಕೆ ಧಕ್ಕೆಯಾದರೆ ಅದನ್ನು ವಿರೋಧಿಸುತ್ತೇವೆ‘ ಎಂದರು.</p>.<p>ರೈತ ಶ್ರೀನಾಥ, ಪ್ರಶಾಂತ ಸೇರಿದಂತೆ ಕೆಲ ರೈತರು ’ಅಂಜನಾದ್ರಿ ಸಮೀಪದ ಭೂಮಿ ಪಡೆದು ಪರ್ಯಾಯ ಭೂಮಿ ಒದಗಿಸಬೇಕು‘ ಎಂದು ಆಗ್ರಹಿಸಿದರು.</p>.<p>ಎ.ಸಿ ಬಸವಣ್ಣೆಪ್ಪ, ರಾಜವಂಶಸ್ಥೆ ಲಲಿತಾ ರಾಣಿ, ಹರಿಹರ ದೇವರಾಯ, ತಹಶೀಲ್ದಾರ್ ಯು.ನಾಗರಾಜ, ಇಒ ಮಹಾಂತಗೌಡ ಪಾಟೀಲ, ಪಿಡಿಒ ಕೃಷ್ಣಪ್ಪ, ಸುದರ್ಶನ್ ವರ್ಮ ಸೇರಿದಂತೆ ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ ಹಾಗೂ ಸಾಣಾಪುರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>