‘ಶಿಕ್ಷಕ ಗಂಗಾಧರಪ್ಪ ಅವರಿಗೆ ಮತ್ತೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ ಇಲಾಖೆ ಅವರಿಂದ ಪಡೆದ ಲಿಖಿತ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಿತ್ತು. ಆದರೆ, ಶೋಕಾಸ್ ನೋಟಿಸ್ಗೆ ಗಂಗಾಧರಪ್ಪ ನೀಡಿದ ಹೇಳಿಕೆ ಸಮಂಜಸವಾಗಿಲ್ಲ ಮತ್ತು ನೇಮಕಾತಿ ಸಂದರ್ಭದಲ್ಲಿ ಸಲ್ಲಿಸಿದ್ದ ದ್ವಿತೀಯ ಪಿಯು ಅಂಕಪಟ್ಟಿ ನಕಲಿಯಾಗಿದ್ದು ಶಿಕ್ಷಣ ಇಲಾಖೆಯನ್ನು ವಂಚಿಸಿರುವುದು ರುಜುವಾತಾಗಿದೆ. ಈ ಕಾರಣಕ್ಕೆ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 8(8)ರ ಅನ್ವಯ ಜುಲೈ 27 ರಿಂದ ಜಾರಿಗೆ ಬರುವಂತೆ ಗಂಗಾಧರಪ್ಪ ಅವರನ್ನು ಶಿಕ್ಷಕ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದುಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಆದೇಶ ಹೊರಡಿಸಿದ್ದಾರೆ.