ಸಾಹಿತ್ಯಕ ವಾತಾವರಣದಿಂದ ದೂರಸರಿದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯಕ ಚಟುವಟಿಕೆಗಳ ಕೇಂದ್ರವನ್ನಾಗಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಬಳಿಗೆ ಕೊಂಡೊಯ್ಯಲು ನನಗೆ ಮತ ನೀಡಬೇಕು. ನುಡಿಯಲ್ಲಿ ನಿಷ್ಠುರತೆ, ಸಜ್ಜನಿಕೆಯ ನಡೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿರುವ ನನ್ನ ವ್ಯಕ್ತಿತ್ವ ಪರಿಷತ್ತಿನ ಘನತೆಗೆ ತಕ್ಕುದ್ದಾಗಿದೆ. ನನಗೆ ಸರ್ಕಾರ ಸಾಕಷ್ಟು ವೇತನ ನೀಡುತ್ತಿದೆ ಎಂದರು. ಎಸ್.ಎ.ಗಫಾರ, ಎಸ್.ಎಂ.ಕಂಬಾಳಿಮಠ, ನಾಗರಾಜ ಗುರಿಕಾರ ಮುಂತಾದವರು ಇದ್ದರು.