<p><strong>ಕುಕನೂರು: </strong>ಬಳಕೆಯಾಗದ ವಸ್ತುಗಳನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುವ ಮೂಲಕ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಮುಖ್ಯಶಿಕ್ಷಕ ಸೋಮಶೇಖರ ನಿಲೋಗಲ್ ಹೇಳಿದರು.</p>.<p>ಇಲ್ಲಿನ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ‘ಕರಕುಶಲ ವಸ್ತುಗಳ ತಯಾರಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಬಳಸಬಹುದಾದ ಪರಿಕರಗಳನ್ನು ತಯಾರಿಸುವ ವಿಧಾನವನ್ನು ಕರಕುಶಲ ತರಗತಿಯಲ್ಲಿ ಶಿಕ್ಷಕರ ಜತೆಗೂಡಿ ಕಲಿಯುತ್ತಾರೆ.</p>.<p>ಥರ್ಮಾಕೋಲ್, ರಬ್ಬರ್, ಪ್ಲಾಸ್ಟಿಕ್, ಪೇಪರ್ ಹಾಗೂ ವಿವಿಧ ಬಣ್ಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಹೂಗಳು, ಬಳೆಗಳು, ಗೊಂಬೆಗಳು, ಕಂಸಾಳೆ, ತ್ರಿಶೂಲ, ಖಡ್ಗ, ಪೇಟ, ತಮಟೆ, ಟೋಪಿಗಳನ್ನು ಕಲಾತ್ಮಕವಾಗಿ ತಯಾರಿಸಿಕೊಳ್ಳುತ್ತಾರೆ. ಸಣ್ಣಮಕ್ಕಳಿಗೆ ಚಿಟ್ಟೆ, ದೋಣಿ, ಟೋಪಿ, ಬೊಂಬೆಗಳನ್ನು ತಯಾರು ಮಾಡಲು ಹೇಳಿಕೊಡುತ್ತಾರೆ ಎಂದರು.</p>.<p>‘ಮಕ್ಕಳಿಗೆ ಬಾಲ್ಯದಿಂದಲೇ ರಾಷ್ಟ್ರನಾಯಕರು ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡುವ ಸಲುವಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಂದಲೇ ತಯಾರಿಸಲಾಗುತ್ತದೆ. ಇದು ಅವರಲ್ಲಿ ಸೃಜನಶೀಲತೆ ಬೆಳೆಯಲು ಸಹಕಾರಿಯಾಗಿದೆ’ ಎಂದು ಮುಖ್ಯಶಿಕ್ಷಕ ಸೋಮಶೇಖರ ಹೇಳಿದರು..</p>.<p>‘ಥರ್ಮಾಕೋಲ್ ಹಾಗೂ ಇತರ ವಸ್ತುಗಳನ್ನು ಕತ್ತರಿಯ ಮೂಲಕ ಕತ್ತರಿಸಿ ವಸ್ತುಗಳನ್ನು ತಯಾರಿಸುವಾಗ ಮಕ್ಕಳು ತುಂಬಾ ಆಸಕ್ತಿಯಿಂದ ಆಲಿಸುತ್ತಾರೆ’ ಎಂದು ಶಿಕ್ಷಕ ರಾಜು ಪೂಜಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು: </strong>ಬಳಕೆಯಾಗದ ವಸ್ತುಗಳನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುವ ಮೂಲಕ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಮುಖ್ಯಶಿಕ್ಷಕ ಸೋಮಶೇಖರ ನಿಲೋಗಲ್ ಹೇಳಿದರು.</p>.<p>ಇಲ್ಲಿನ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ‘ಕರಕುಶಲ ವಸ್ತುಗಳ ತಯಾರಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಬಳಸಬಹುದಾದ ಪರಿಕರಗಳನ್ನು ತಯಾರಿಸುವ ವಿಧಾನವನ್ನು ಕರಕುಶಲ ತರಗತಿಯಲ್ಲಿ ಶಿಕ್ಷಕರ ಜತೆಗೂಡಿ ಕಲಿಯುತ್ತಾರೆ.</p>.<p>ಥರ್ಮಾಕೋಲ್, ರಬ್ಬರ್, ಪ್ಲಾಸ್ಟಿಕ್, ಪೇಪರ್ ಹಾಗೂ ವಿವಿಧ ಬಣ್ಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಹೂಗಳು, ಬಳೆಗಳು, ಗೊಂಬೆಗಳು, ಕಂಸಾಳೆ, ತ್ರಿಶೂಲ, ಖಡ್ಗ, ಪೇಟ, ತಮಟೆ, ಟೋಪಿಗಳನ್ನು ಕಲಾತ್ಮಕವಾಗಿ ತಯಾರಿಸಿಕೊಳ್ಳುತ್ತಾರೆ. ಸಣ್ಣಮಕ್ಕಳಿಗೆ ಚಿಟ್ಟೆ, ದೋಣಿ, ಟೋಪಿ, ಬೊಂಬೆಗಳನ್ನು ತಯಾರು ಮಾಡಲು ಹೇಳಿಕೊಡುತ್ತಾರೆ ಎಂದರು.</p>.<p>‘ಮಕ್ಕಳಿಗೆ ಬಾಲ್ಯದಿಂದಲೇ ರಾಷ್ಟ್ರನಾಯಕರು ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡುವ ಸಲುವಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಂದಲೇ ತಯಾರಿಸಲಾಗುತ್ತದೆ. ಇದು ಅವರಲ್ಲಿ ಸೃಜನಶೀಲತೆ ಬೆಳೆಯಲು ಸಹಕಾರಿಯಾಗಿದೆ’ ಎಂದು ಮುಖ್ಯಶಿಕ್ಷಕ ಸೋಮಶೇಖರ ಹೇಳಿದರು..</p>.<p>‘ಥರ್ಮಾಕೋಲ್ ಹಾಗೂ ಇತರ ವಸ್ತುಗಳನ್ನು ಕತ್ತರಿಯ ಮೂಲಕ ಕತ್ತರಿಸಿ ವಸ್ತುಗಳನ್ನು ತಯಾರಿಸುವಾಗ ಮಕ್ಕಳು ತುಂಬಾ ಆಸಕ್ತಿಯಿಂದ ಆಲಿಸುತ್ತಾರೆ’ ಎಂದು ಶಿಕ್ಷಕ ರಾಜು ಪೂಜಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>