<p><strong>ಕನಕಗಿರಿ:</strong> ಮೊಹರಂ ಹಬ್ಬದ ನಂತರ ಸಮಾನ ಮನಸ್ಕ ಗೆಳೆಯರು, ಯುವಕರು ಕೂಡಿಕೊಂಡು ಆಚರಿಸುವ ಕವಡಿ ಪೀರ ದೇವರ ವಿಸರ್ಜನೆ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.</p>.<p>ಪಟ್ಟಣದ ವಿವಿಧ ಮಸೀದಿ, ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಖತ್ತಲ್ ರಾತ್ರಿಯನ್ನು ಬುಧವಾರ ರಾತ್ರಿ ಆಚರಿಸಲಾಯಿತು.</p>.<p>ಗುರುವಾರ ಬೆಳಿಗ್ಗೆ ಹರಕೆ ಹೊತ್ತ ಮನೆಗಳಿಗೆ ತೆರಳಿದ ದೇವರಿಗೆ ಭಕ್ತರು ಸಕ್ಕರೆ, ಸಿಹಿ ಖಾದ್ಯ, ಹೂವು ಸಮರ್ಪಿಸಿದರು.</p>.<p>ಒಂದನೇಯ ವಾರ್ಡ್ನಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಮುಜಾವರು ಅರ್ಧ ಕಿಮೀ ದೂರ ಮಂಡಿಗಾಲಿನಲ್ಲಿ ನಡೆದು ಗಮನ ಸೆಳೆದರು.</p>.<p>ಸಾವಿರಾರು ಸಂಖ್ಯೆಯ ಭಕ್ತರು ಈ ದೃಶ್ಯ ನೋಡಲು ಲಿಂಗಸೂರು-ಗಂಗಾವತಿ ರಸ್ತೆಯಲ್ಲಿ ನಿಂತು ವೀಕ್ಷಿಸಿದರು. ಈ ವೇಳೆ ರಸ್ತೆಯಲ್ಲಿ ಜನ ಜಂಗುಳಿ ಇದ್ದರಿಂದ ಬಸ್ ಇತರೆ ವಾಹನಗಳು ಕೆಲ ಸಮಯ ಹಳೆ ತಾವರಗೇರಾ ರಸ್ತೆ ಮೂಲಕ ಸಂಚರಿಸಿದವು.</p>.<p>ಪ್ರವಾಸಿ ಮಂದಿರದ ಹಳ್ಳದ ಪರಿಸರದಲ್ಲಿ ವಿಸರ್ಜನೆಗೆ ತೆರಳಿದವು. ಹಲಗಿ, ಹೆಜ್ಜೆ ಮೇಳ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ಮೊಹರಂ ಹಬ್ಬದ ನಂತರ ಸಮಾನ ಮನಸ್ಕ ಗೆಳೆಯರು, ಯುವಕರು ಕೂಡಿಕೊಂಡು ಆಚರಿಸುವ ಕವಡಿ ಪೀರ ದೇವರ ವಿಸರ್ಜನೆ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.</p>.<p>ಪಟ್ಟಣದ ವಿವಿಧ ಮಸೀದಿ, ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಖತ್ತಲ್ ರಾತ್ರಿಯನ್ನು ಬುಧವಾರ ರಾತ್ರಿ ಆಚರಿಸಲಾಯಿತು.</p>.<p>ಗುರುವಾರ ಬೆಳಿಗ್ಗೆ ಹರಕೆ ಹೊತ್ತ ಮನೆಗಳಿಗೆ ತೆರಳಿದ ದೇವರಿಗೆ ಭಕ್ತರು ಸಕ್ಕರೆ, ಸಿಹಿ ಖಾದ್ಯ, ಹೂವು ಸಮರ್ಪಿಸಿದರು.</p>.<p>ಒಂದನೇಯ ವಾರ್ಡ್ನಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಮುಜಾವರು ಅರ್ಧ ಕಿಮೀ ದೂರ ಮಂಡಿಗಾಲಿನಲ್ಲಿ ನಡೆದು ಗಮನ ಸೆಳೆದರು.</p>.<p>ಸಾವಿರಾರು ಸಂಖ್ಯೆಯ ಭಕ್ತರು ಈ ದೃಶ್ಯ ನೋಡಲು ಲಿಂಗಸೂರು-ಗಂಗಾವತಿ ರಸ್ತೆಯಲ್ಲಿ ನಿಂತು ವೀಕ್ಷಿಸಿದರು. ಈ ವೇಳೆ ರಸ್ತೆಯಲ್ಲಿ ಜನ ಜಂಗುಳಿ ಇದ್ದರಿಂದ ಬಸ್ ಇತರೆ ವಾಹನಗಳು ಕೆಲ ಸಮಯ ಹಳೆ ತಾವರಗೇರಾ ರಸ್ತೆ ಮೂಲಕ ಸಂಚರಿಸಿದವು.</p>.<p>ಪ್ರವಾಸಿ ಮಂದಿರದ ಹಳ್ಳದ ಪರಿಸರದಲ್ಲಿ ವಿಸರ್ಜನೆಗೆ ತೆರಳಿದವು. ಹಲಗಿ, ಹೆಜ್ಜೆ ಮೇಳ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>