ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕ ತಂಡ ಬನ್ನಿಪೂಜೆ ಮತ್ತು ಚಾಮುಂಡೇಶ್ವರಿ ಪೂಜೆಯ ವಿಧಿ, ವಿಧಾನಗಳನ್ನು ನಡೆಸಿಕೊಟ್ಟಿತು. ಕಲ್ಯಾಣಿಯಲ್ಲಿ ಗಂಗೆ ಪೂಜೆ, ಮಂಟಪದಲ್ಲಿ ಮಹಾ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನವಗ್ರಹ ದೇವತೆಗಳ ಪ್ರಾರ್ಥನೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಮತ್ತು ತ್ರಿಗುಣಾಂಬಿಕಾ ಸ್ವರೂಪಿಣಿ ಚಾಮುಂಡೇಶ್ವರಿ ಪೂಜೆಗಳು ನಡೆದವು.