ದೇವರು ಕೂಡ ಗುಡಿಯಲ್ಲಿದ್ದಾನೆ. ಆದರೆ, ಅವನನ್ನು ಕಾಣುವ ಭಕ್ತಿ, ಪ್ರೇಮ, ಮಾನವನ ಎದೆಯಲ್ಲಿ ಇರುವುದೇ ಹೊರತು ಆಚರಣೆಯಲ್ಲಲ್ಲ. ಧರ್ಮದ ಭಕ್ತಿಯ ಗುರಿ ಅಧ್ಯಾತ್ಮ. ಅದು ರಸಪಥವನ್ನು ಮುಟ್ಟಬೇಕು. ಈ ಹಾದಿಯಲ್ಲಿ ಪ್ರೀತಿ, ಕರುಣೆ, ಮಾನವೀಯತೆ, ಪೂರ್ಣತೆ ಎಲ್ಲವೂ ಮೇಳೈಸಿದಾಗ ಅಧ್ಯಾತ್ಮ ಲಭಿಸುತ್ತದೆ ಎಂದು ಪು.ತಿ.ನ ಹೇಳುತ್ತಿದ್ದರು ಎಂದು ತಿಳಿಸಿದರು.