ಪ್ರದೀಪ್ ಕುಮಾರ್ ಅವರ ಪುತ್ರಿ ವಿಧಿಶಾಳ ಕೆನ್ನೆ ಹಾಗೂ ತುಟಿಯ ಭಾಗದ ಮಾಂಸಖಂಡಗಳು ಕಿತ್ತು ಬಂದಿವೆ. ಗಂಭೀರವಾಗಿ ಗಾಯಗೊಂಡಿರುವ ಆಕೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದ ಮಕ್ಕಳ ಬೆನ್ನು, ಭುಜ, ಕೈ, ಕಾಲುಗಳಿಗೆ ನಾಯಿ ಕಚ್ಚಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.